ಕೇಜ್ರೀವಾಲ್​ ಮೇಲೆ ಖಾರದ ಪುಡಿ ದಾಳಿ!

ದೆಹಲಿ:

     ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ದಾಳಿ ನಡೆಸಿದ್ದಾರೆ. 

      ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದಿಲ್ಲಿ ಸಚಿವಾಲಯ ಕಟ್ಟಡದ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಯಿಂದ ಮಧ್ಯಾಹ್ನ ಊಟಕ್ಕೆಂದು ಹೊರಬಂದ ವೇಳೆ ಈ ದಾಳಿ ನಡೆದಿದೆ. ದೆಹಲಿಯ ಸಚಿವಾಲಯದ ಎದುರು ಘಟನೆಯ ಸಂಭವಿಸಿದ್ದು, ಘಟನೆಯಿಂದಾಗಿ ಅರವಿಂದ್​​ ಕೇಜ್ರೀವಾಲ್​ ಅವರು ಧರಿಸಿದ್ದ ಕನ್ನಡಕಕ್ಕೆ ಹಾನಿಯಾಗಿದೆ.

      ಸಿಎಂ ಕೇಜ್ರೀವಾಲ್​ ಮೇಲೆ ಖಾರದ ಪುಡಿ ಎರಚಿದ ವ್ಯಕ್ತಿಯನ್ನು ಅನಿಲ್​ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಅನಿಲ್​ ಶರ್ಮಾನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

       ಈ ಬಗ್ಗೆ ಟ್ವೀಟ್ ಮಾಡಿರುವ ಆಮ್ ಆದ್ಮಿ, “ದಿಲ್ಲಿ ಪೊಲೀಸರಿಂದ ಗಂಭೀರ ಭದ್ರತಾ ಲೋಪ. ದಿಲ್ಲಿಯಲ್ಲಿ ಮುಖ್ಯಮಂತ್ರಿ ಕೂಡ ಸುರಕ್ಷಿತರಲ್ಲ” ಎಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link