ಚಿತ್ರದುರ್ಗ : ಮಣ್ಣಿನ ದಿಬ್ಬ ಕುಸಿದು ಇಬ್ಬರ ಯುವಕರ ಧಾರುಣ ಸಾವು!!

ಚಿತ್ರದುರ್ಗ :

    ಮಣ್ಣಿನ ದಿಬ್ಬಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಗ್ರಾಮದಲ್ಲಿ ನಡೆದಿದೆ.

     ಹರೀಶ (24), ನಂದೀಶ (35) ಮೃತ ದುರ್ದೈವಿಗಳು. ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದ ಮನೆಯ ಸುತ್ತ ಮಳೆ ನೀರು ನಿಲ್ಲುತ್ತಿತ್ತು. ಇದಕ್ಕೆ ಮಣ್ಣು ಹಾಕಿ ಸರಿ ಮಾಡಲು ಯುವಕರು ಆಲೋಚಿಸಿದ್ದರು.

     ಮಣ್ಣು ತುಂಬುವ ಕೆಲಸವನ್ನು ಒಪ್ಪಿಕೊಂಡು 5 ಜನ ಯುವಕರು ಸಮೀಪದ ದೊಡ್ಡಹಳ್ಳಕ್ಕೆ ಎತ್ತಿನಗಾಡಿಯೊಂದಿಗೆ ತೆರಳಿದ್ದರು. ಮೇಲ್ಭಾಗದಲ್ಲಿ ಮಳೆಯಿಂದ ಹಸಿಯಾದ ಮಣ್ಣಿದ್ದರಿಂದ ಆಳವಾದ ಗುಂಡಿಯಿಂದ ಒಣ ಮಣ್ಣು ತೆಗೆದು ಎತ್ತಿನ ಗಾಡಿಗೆ ತುಂಬಲು ಮುಂದಾದರು. ನಂದೀಶ ನಾಯ್ಕ್‌ ಮತ್ತು ಹರೀಶ ಮಣ್ಣಿನ ಗುಂಡಿಯಲ್ಲಿ ಇಳಿದು ಮಣ್ಣು ತುಂಬುತ್ತಿದ್ದಾಗ ದಿಬ್ಬ ಏಕಾ ಏಕಿ ಕುಸಿದಿದೆ.

    ಆ ಇಬ್ಬರೂ ಮಣ್ಣಿನ ಕೆಳಗೆ ಸಿಲುಕಿದ್ದು, ಉಸಿರುಗಟ್ಟಿ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಕುರಿತು ನಾಯಕನಹಟ್ಟಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap