ಅತೃಪ್ತರ ಮನವೊಲಿಕೆಗೆ ಸಿಎಂ ಮುಂಬೈಗೆ…!?

 ಬೆಂಗಳೂರು:

      ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಅತೃಪ್ತರ ಮನವೊಲಿಕೆಗೆ ಸೋಮವಾರ ಮುಂಬೈಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

      ಸೋಮವಾರ ಬೆಳಿಗ್ಗೆಯೇ ಅಧಿವೇಶನ ಕಲಾಪ ಆರಂಭಕ್ಕೂ ಮುನ್ನವೇ ಮುಂಬೈಗೆ ತೆರಳಿ ಅತೃಪ್ತರ ಮನವೊಲಿಕೆಯ ಕೊನೆಯ ಕಸರತ್ತು ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

      ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅತೃಪ್ತರ ಮನವೊಲಿಕೆಗೆ ಮುಂಬೈಗೆ ತೆರಳಿದಾಗ ಮಹಾರಾಷ್ಟ್ರ ಪೋಲೀಸರು ಅವರನ್ನು ಹೋಟೆಲ್ ಒಳಗಡೆ ಬಿಡದಿರುವುದರಿಂದ ಅವರು ಬರಿಗೈಯಲ್ಲಿ ವಾಪಸ್ ಬಂದಿದ್ದರು.

      ಆದರೆ, ಮುಖ್ಯಮಂತ್ರಿ ಹೋಗುವುದರಿಂದ ಅವರನ್ನು ಒಳಗೆ ಬಿಡಲು ಪೊಲೀಸರು ನಿರಾಕರಿಸಿದರೆ, ಪ್ರೊಟೊಕಾಲ್ ಸಮಸ್ಯೆಯಾಗುವುದರಿಂದ ಅತೃಪ್ತರ ಭೇಟಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಕಾರಣಕ್ಕೆ ಸ್ವತಃ ಮುಖ್ಯಮಂತ್ರಿಯೆ ಮುಂಬೈಗೆ ತೆರಳಿ ರಾಜೀನಾಮೆ ಸಲ್ಲಿಸಿರುವ ಅತೃಪ್ತರ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap