‘ನಾನು ಮಾರಾಟವಾಗಿರುವುದು ನಿಜವಾದರೆ ಆತ್ಮಹತ್ಯೆಗೆ ಸಿದ್ಧ’ : ಉಮೇಶ್ ಜಾಧವ್

ಕಲಬುರಗಿ :

       ‘ನಾನು 50 ಕೋಟಿ ರೂ.ಗೆ ಬಿಜೆಪಿಗೆ ಮಾರಾಟವಾಗಿರುವುದು ನಿಜವೆಂದು ಸಾಬೀತಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ ಜಾಧವ್ ಹೇಳಿದ್ದಾರೆ.

     ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇವೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೂ ಇಂತಹ ಆರೋಪ ಬಂದಿದೆ. ಹೀಗಾಗಿ ಅಧಿವೇಶನವೇ ಸರಿಯಾಗಿ ನಡೆಯಲಿಲ್ಲ. ಹಣ ಪಡೆದಿದ್ದೇವೆ ಎನ್ನುವ ಆರೋಪದಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

      ಅತೃಪ್ತ ಶಾಸಕರ ಲಿಸ್ಟ್ ನಲ್ಲಿ ಶಾಸಕ ಉಮೇಶ ಜಾದವ್ ಕೂಡ ಒಬ್ಬರಾಗಿದ್ದರು. ಆಪರೇಷನ್ ಕಲಮದ ದಾಳಕ್ಕೆ ಉಮೇಶ್ ಜಾದವ್ ಸಿಲುಕಿಕೊಂಡಿದ್ದರು ಎಂದು ಸ್ವಪಕ್ಷದ ಮುಖಂಡರೇ ಅವರ ಮನೆಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap