ಕೊರೊನಾ ವೈರಸ್ : ಜಪಾನ್ ನಲ್ಲಿ ರಾಜ್ಯದ ಯುವಕನ ದಿಗ್ಭಂಧನ!!!

ಕಾರವಾರ:

      ಕೊರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿದ್ದ ಹಡಗನ್ನು ತಡೆ ಹಿಡಿದಿರುವ ಕಾರಣ ಯುವಕನ ಮದುವೆ ನಿಂತು ಹೋಗಿರುವ ಘಟನೆ ನಡೆದಿದೆ.

     ಜಪಾನಿನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರವಾರದ ಪದ್ಮನಾಭನಗರದ ಯುವಕ ಅಭಿಷೇಕ್ ಕಳೆದ ಆರು ತಿಂಗಳಿಂದ ಸ್ಟಿವರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಡಗಿನಲ್ಲಿದ್ದ ಚೀನಾ ಮೂಲದ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್ ತಗುಲಿದ ಹಿನ್ನೆಲೆಯಲ್ಲಿ ಹಡಗನ್ನು ಜಪಾನಿನ ಯುಕೋಮದಲ್ಲಿ ತಡೆ ಹಿಡಿಯಲಾಗಿದೆ.‌ ಚೀನಾದಿಂದ ಜಪಾನಿಗೆ ಹೋಗಿ ಈ ಹಡಗು ವಾಪಸ್​ ಆಗುತ್ತಿತ್ತು ಎನ್ನಲಾಗಿದೆ.

     ಇನ್ನಷ್ಟು ಮಂದಿಗೆ ರೋಗ ಹರಡುವ ಭೀತಿಯಿಂದಾಗಿ ಕ್ರೂಸ್ ಹಡಗನ್ನು ತಡೆಹಿಡಿದಿದ್ದು, ಇದರಿಂದ ಕಾರವಾರದ ಯುವಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಹಿನ್ನೆಲೆಯಲ್ಲಿ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನು ಸೋಂಕು ತಗಲದ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap