ಡಿಕೆಶಿ ತಪ್ಪು ಮಾಡಿದ್ದೇನೆಂದು ಸ್ವತಃ ಒಪ್ಪಿಕೊಂಡಿದ್ದಾರೆ – ಸಚಿವ ಸಿ.ಟಿ.ರವಿ

ರಾಮನಗರ:

      ಮಾಜಿ‌ ಸಚಿವ ಡಿಕೆ ಶಿವಕುಮಾರ್ ರವರ ಬಂಧನ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಸಚಿವ ಸಿ.ಟಿ.ರವಿ ಹೇಳಿದರು.

      ಗುರುವಾರ ರಾಮನಗರದಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಡಿಕೆಶಿರವರು ನಾನು ತಪ್ಪು ಮಾಡಿದ್ದೇನೆಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಪರಮೇಶ್ವರ್ ಜೊತೆಗೆ ಅವರೇ ತಮ್ಮ ತಪ್ಪನ್ನ ಹೇಳಿಕೊಂಡಿದ್ದಾರೆ. ಡಿಕೆಶಿ ಬಂಧನ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿಯೇ ಕೆಲವರು ಖುಷಿ ಪಡ್ತಿದ್ದಾರೆ, ಆದರೆ ರಾಜಕೀಯವಾಗಿ ಕೇಂದ್ರದ ಕಡೆಗೆ ಕೈ ತೋರಿಸುತ್ತಿರುವುದು ಸರಿಯಲ್ಲ ಎಂದರು. 

      ಕಾನೂನು ಎಲ್ಲರಿಗಿಂತ ದೊಡ್ಡದು. ದೇಶದ ಜನರು ಇದಕ್ಕೆ ತಲೆಬಾಗಬೇಕು. ಯಾರು ಕಾನೂನಿನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಕೆಲವರು ವಿನಾಕಾರಣ ಕೇಂದ್ರ ಸರ್ಕಾರದ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತಿದ್ದು ಇದರಲ್ಲಿ ಅವರಿಗೆ ಜಯ ಸಿಗುವುದಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap