ನಟ ದರ್ಶನ್ – ನಿರ್ಮಾಪಕ ಉಮಾಪತಿ ಸಂಧಾನ ಸಕ್ಸಸ್!!

ಬೆಂಗಳೂರು :

     ನಟ ದರ್ಶನ್ ವಂಚನೆ ಕೇಸ್ ಕುರಿತಂತೆ ದಿನಕ್ಕೊಂದು ವಿದ್ಯಾಮಾನಗಳು ನಡೆಯುತ್ತಿವೆ. ಇದರ ಮಧ್ಯೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಸಂಧಾನ ಯಶಸ್ವಿಯಾಗಿದೆ.

     ಈ ಕುರಿತಂತೆ ಮಾತನಾಡಿದಂತ ನಿರ್ಮಾಪಕ ಉಮಾಪತಿಯವರು, ನಾನು ಹಾಗೂ ನಟ ದರ್ಶನ್ ಮಾತನಾಡಿದ್ದೇವೆ. ವಂಚನೆ ಯತ್ನ ಪ್ರಕರಣ ಕುರಿತಂತೆ ಒಂದು ನಿರ್ಣಯಕ್ಕೆ ಬಂದಿದ್ದೇನೆ. ನಾವಿಬ್ಬರೂ ಇನ್ಮುಂದೆ ಈ ವಿಚಾರವಾಗಿ ಮಾತನಾಡೋದಿಲ್ಲ. ಅಲ್ಲದೇ ಸಂಜೆ 5 ಗಂಟೆಗೆ ನಾನು ಮತ್ತು ನಟ ದರ್ಶನ್ ಜಂಟಿಯಾಗಿ ನಡೆಸಲು ಉದ್ದೇಶಿಸಿದ್ದಂತ ಸುದ್ದಿಗೋಷ್ಠಿ ಕೂಡ ನಡೆಸುತ್ತಿಲ್ಲ ಎಂದರು.

      ನಟ ದರ್ಶನ್ ಈ ವಿಚಾರವನ್ನು ಇಲ್ಲಿಗೆ ಎಂಡ್ ಮಾಡೋಣ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಈ ವಿಚಾರವಾಗಿ ನಾವಿಬ್ಬರೂ ಇನ್ನು ಮಾತನಾಡುವುದಿಲ್ಲ. ಈ ವಿಚಾರವನ್ನು ಮುಂದುವರೆಸೋದು ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap