ಹಾಸನ:
ಸಿದ್ದರಾಮಯ್ಯ ಹಾಗೂ ನಾನು ಒಂದು ಕಾಲದಲ್ಲಿ ಉತ್ತಮ ಸ್ನೇಹಿತರು. ಕೆಲ ಕಾರಣದಿಂದ ದೂರವಾಗಬೇಕಾಯಿತಷ್ಟೇ ಎಂದು ಜೆಡಿಎಸ್ ವರಿಷ್ಠ ಎಚ್. ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ
ಜಿಲ್ಲೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸಿದ್ದರಾಮಯ್ಯ ಹಾಗೂ ನಾನು ಉತ್ತಮ ಸ್ನೇಹಿತರು. ಕೆಲ ಕಾರಣದಿಂದ ದೂರವಾಗಬೇಕಾಯಿತಷ್ಟೇ ಈಗ ಸಿದ್ದರಾಮಯ್ಯನವರು ಸಿಎಂ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಸಣ್ಣಪುಟ್ಟ ದೋಷ ಇರುವುದು ಸತ್ಯ. ಆದರೆ ಅದನ್ನು ಸರಿ ಪಡಿಸುವ ಶಕ್ತಿ 130 ವರ್ಷ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ತಿಳಿಸಿದರು.
ಬಿಜೆಪಿ ಕೋಪ ಸಹಜ:
104 ಸ್ಥಾನ ಪಡೆದುಕೊಂಡರೂ ಸರ್ಕಾರ ರಚನೆ ಮಾಡಲು ಆಗದೆ ಇರುವುದಕ್ಕೆ ಬಿಜೆಪಿ ನಾಯಕರಿಗೆ ಕೋಪ ಇರುವುದು ಸಹಜ. ಆದರೆ ಅವರು ವಿಶ್ವಾಸ ಮತ ಯಾಚನೆಯಲ್ಲಿ ವಿಫಲರಾದ ಮೇಲೆಯೇ ಕುಮಾರಸ್ವಾಮಿ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/devegwda-sidd.gif)