ಬೆಂಗಳೂರು:

ಕೇವಲ ಮಾಧ್ಯಮಗಳಲ್ಲಿ ಪೋಜ್ ಕೊಟ್ಟವರೆಲ್ಲಾ ಪ್ರಭಾವಿ ಲೀಡರ್ ಆಗಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ನಾಯಕರಾದವರು ಎದೆಯುಬ್ಬಿಸಿ ನಡೆದು, ಕೇವಲ ಮಾಧ್ಯಮಗಳ ಎದುರು ಪೋಸ್ ಕೊಟ್ಟರೆ ಅವರು ಪ್ರಭಾವಿ ಲೀಡರ್ ಆಗೋದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕಾಗಿ ಶ್ರಮ ಹಾಕಿ ದುಡಿಯುವವನೇ ಪ್ರಭಾವಿ ಲೀಡರ್ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ಡಿಕೆಶಿ ಜೈಲಿಗೆ ಹೋಗ್ತಾರೆ ಅಂತ ಶ್ರೀರಾಮುಲು ಹೇಳಿದ್ದು ತಪ್ಪು. ಅವರ ನಸೀಬು ಇದ್ದಂಗೆ ಆಗುತ್ತದೆ. ಈ ವಿಷಯದಲ್ಲಿ ನಾನು ಡಿಕೆಶಿ ಪರ ನಿಲ್ಲುತ್ತೇನೆ. ಆದರೆ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಾನು ಸಚಿವ ಡಿ.ಕೆ.ಶಿವಕುಮಾರ್ ಜೊತೆ ಪ್ರಚಾರಕ್ಕೆ ಹೋಗಲ್ಲ ಅಂತ ಸಚಿವ ರಮೇಶ್ ಜಾರಕಿಹೊಳಿಯವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








