ಮಂಡ್ಯ : ತೋಟದ ಮನೆಯಲ್ಲಿ ಕಾರ್ಮಿಕರ ಜೋಡಿ ಕೊಲೆ!!

ಮಂಡ್ಯ:

     ತೋಟದ ಮನೆಯಲ್ಲಿ ಮಲಗಿದ್ದ ಇಬ್ಬರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಮಂಡ್ಯದ ಯಲಿಯೂರು ಸಮೀಪದ ತೋಟದ ಮನೆಯಲ್ಲಿ ನಡೆದಿದೆ.

    ರಾಮಮೂರ್ತಿ(46)ಬಸವರಾಜು(44) ಕೊಲೆಯಾದ ವ್ಯಕ್ತಿಗಳು. ಕೊಲೆಯಾದ ಇಬ್ಬರೂ ಮಾರುತಿ ಬ್ರಿಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

     ರಾತ್ರಿ ತೋಟದ ಮನೆಯಲ್ಲಿ‌ ಮಲಗಿದ್ದ ವೇಳೆ, ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ದಾಳಿ ನಡೆಸಿ ಕೊಲೆ ಮಾಡಿ ಹೋಗಿದ್ದಾರೆ.

    ಕೊಲೆಗೆ ಕಾರಣ ಇನ್ನೂ ತಿಳಿದಯಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap