ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ : ಸಿಬಿಐ ತನಿಖೆ ಪೂರ್ಣ!!

ಮಡಿಕೇರಿ: 

      ಮಡಿಕೇರಿಯಲ್ಲಿ 2016ರಲ್ಲಿ ನಡೆದ ಡಿವೈಎಸ್‌ಪಿ ಮಾದಪಂಡ ಗಣಪತಿ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಚೆನ್ನೈಯ ಸಿಬಿಐ ಪೂರ್ಣಗೊಳಿಸಿದೆ.

     ಡಿವೈಎಸ್ಪಿ ಗಣಪತಿ ಸಾವಿನ ತನಿಖೆ ನಡೆಸುವಂತೆ ಕುಟುಂಬಸ್ಥರು ಜೆಎಂಎಫ್‍ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಂದಿನ ನ್ಯಾಯಮೂರ್ತಿಗಳು ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ಸರ್ಕಾರ ಸಿಐಡಿಗೆ ಪ್ರಕರಣವನ್ನು ನೀಡಿದ್ದ ಪರಿಣಾಮ ನಗರ ಪೊಲೀಸರಿಗೆ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆಯನ್ನು ಕೈಗೆತ್ತಿಕೊಂಡ ಚೆನ್ನೈ ಸಿಬಿಐ ತಂಡ ಕಳೆದ 3 ವರ್ಷಗಳಿಂದ ಹಲವು ಬಾರಿ ಕೊಡಗಿಗೆ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು.

      ಈಗ ತನಿಖೆ ಪೂರ್ಣಗೊಂಡಿದ್ದು, ಚೆನ್ನೈನ ಸಿಬಿಐ ತಂಡದ ಡಿವೈಎಸ್‌ಪಿ ರವಿ ಮತ್ತು ಸಿಬಿಐಯ ಸರಕಾರಿ ವಕೀಲ ಸುಬೋಧ್‌ ನೇತೃತ್ವದಲ್ಲಿ ಕೋರ್ಟ್‌ಗೆ ಆಗಮಿಸಿದ ನಾಲ್ವರು ಸಿಬಿಐ ಅಧಿಕಾರಿಗಳು, ಒಟ್ಟು 262 ಪುಟಗಳ ಸುದೀರ್ಘ‌ ತನಿಖಾ ವರದಿಯನ್ನು ಸಲ್ಲಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap