ಮೈಸೂರು :  ಕಾಲುಜಾರಿ ಕೆರೆಗೆ ಬಿದ್ದು ತಂದೆ, ಮಗ ಸಾವು!!

ಮೈಸೂರು: 

      ಹಸು ತೊಳೆಯಲು ಕೆರೆಗೆ ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ತಂದೆ, ಮಗ ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮುಲೆಪೆಟ್ಲುನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

      ಮೃತರನ್ನು ಸುರೇಶ್ (45) ಮತ್ತು ಆತನ ಮಗ ವಿಕಾಸ್ (16) ಎಂದು ಗುರುತಿಸಲಾಗಿದೆ.

      ಸುರೇಶ್ ಮತ್ತು ವಿಕಾಸ್ ಹಿನ್ನೀರಿನ ಬಳಿ ಬುಧವಾರ ದನ ಮೇಯಿಸಲು ತೆರಳಿದ್ದರು. ಸಂಜೆಯಾಗುತ್ತಿದ್ದಂತೆ ಸುರೇಶ್ ಅವರು ದನಗಳನ್ನು ತೊಳೆಯಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಗಾಳಿ, ಮಳೆ ಪ್ರಾರಂಭವಾಗಿದ್ದರಿಂದ ಬೆದರಿದ ದನವು ಹಗ್ಗ ಹಿಡಿದಿದ್ದ ಸುರೇಶ್ ಅವರನ್ನು ನೀರಿಗೆ ಎಳೆದಿದೆ. ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಲು ಪುತ್ರ ವಿಕಾಸ ಸಹ ನೀರಿಗೆ ಧುಮುಕಿದ್ದಾರೆ. ಆದರೆ, ನದಿಯಲ್ಲಿ ಮರಳು ತೆಗೆದು ಆಳವಾದ ಗುಂಡಿಗಳು ಇದ್ದುದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

     ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈಜುಗಾರರ ಸಹಾಯದಿಂದ ಶವಗಳನ್ನು ಟ್ಯಾಂಕ್ ನಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

      ಈ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap