ರಾಯಚೂರು : ಹೆತ್ತ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ತಂದೆ!

ರಾಯಚೂರು : 

       ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಯರಜಂತಿಯಲ್ಲಿ ನಡೆದಿದೆ.

      ಮೋನಮ್ಮ (14) ಕೊಲೆಯಾದ ನತದೃಷ್ಟೆ.‌ ಆರೋಪಿ ತಿಮ್ಮಯ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮನೆ ಎದುರು ಪಾತ್ರೆ ತೊಳೆಯುತ್ತ ಕುಳಿತ್ತಿದ್ದ ಮಗಳ ಕುತ್ತಿಗೆಗೆ ಕೊಡಲಿಯಿಂದ ಕೊಚ್ಚಿ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದಾರನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

     ಸ್ಥಳಕ್ಕಾಗಮಿಸಿದ ಹಟ್ಟಿ ಪೊಲೀಸರು ಪರಿಶೀಲಿಸಿ, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಟ್ಟಿ ಠಾಣೆಯ ಪೊಲೀಸರು ಆರೋಪಿಗೆ ಶೋಧ ಮುಂದುವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap