ಬೆಂಗಳೂರು :
ವಿಧಾನಸೌಧದಲ್ಲಿ ಇಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಸದನದಿಂದ ಹೊರನಡೆದಿದ್ದಾರೆ.
ದೋಸ್ತಿ ಸರ್ಕಾರದ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಳಿದು ಸರ್ಕಾರಕ್ಕೆ ಸಂಖ್ಯಾಬಲ ಇಲ್ಲ ಎಂದು ಘೋಷಣೆ ಕೂಗಿದರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗದ್ದಲದ ನಡುವೆಯೂ 22 ಪುಟಗಳ ಪೈಕಿ 2 ಪುಟಗಳ ಭಾಷಣ ಮಾಡಿದರು. ಗದ್ದಲ ಹೆಚ್ಚಾಗಿದ್ದರಿಂದ ರಾಜ್ಯಪಾಲರು ವಿಧಾನಸಭೆ ಸ್ಪೀಕರ್ ರಮೇಶ್ಕುಮರ್ ಅವರ ಬಳಿ ಸಂಪೂರ್ಣವಾಗಿ ಓದಬೇಕೆ ಇಲ್ಲವೇ ಕೊನೆಯ ಪುಟವನ್ನು ಓದಬೇಕೆ ಎಂದು ಕೇಳಿದರು, ಅದಕ್ಕೆ ಸ್ಪೀಕರ್ ಕೊನೆಯ ಪುಟವನ್ನು ಓದಿ ಭಾಷಣವನ್ನು ಮುಗಿಸಿ ಎಂದು ಸಲಹೆ ನೀಡುತ್ತಿದ್ದಂತೆ, ರಾಜ್ಯಪಾಲರು ತಮ್ಮ ಭಾಷಣವನ್ನು ಸ್ಥಗಿತಗೊಳಿಸಿ ಸದನದಿಂದ ಹೊರನಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/Vajubhai-Vala-1.gif)