ಕೇಂದ್ರದಿಂದ ‘ಬೆಂಗಳೂರು ರೋಸ್ ಈರುಳ್ಳಿ’ ರಪ್ತಿಗೆ ಅನುಮತಿ!!

ನವದೆಹಲಿ:

    ಕರ್ನಾಟಕದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುವ ರೋಸ್ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

     ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಚೈನ್ನೈ ಬಂಧನರಿನ ಮೂಲಕ ಬೆಂಗಳೂರಿನ ರೋಸ್ ಈರುಳ್ಳಿಯನ್ನು ಆಮದು ಮಾಡಲು ಅನುಮತಿ ನೀಡಲಾಗಿದೆ. 31ನೇ ಮಾರ್ಚ್ 2021ರ ಒಳಗಾಗಿ ರಪ್ತುಗೊಳಿಸಲು ಅವಕಾಶ ನೀಡಿದೆ.

order copy

     ರಫ್ತುದಾರನು ಕರ್ನಾಟಕ ಸರ್ಕಾರದ ತೋಟಗಾರಿಕೆ ಆಯುಕ್ತರಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು. ಉತ್ಪನ್ನ ಮತ್ತು ರಫ್ತು ಮಾಡಬೇಕಾದ ‘ಬೆಂಗಳೂರು ಗುಲಾಬಿ’ ಈರುಳ್ಳಿಯ ಪ್ರಮಾಣ ಪ್ರಮಾಣೀಕರಿಸಬೇಕು ಎಂದು ಹೇಳಿದೆ.

     ಕೇವಲ ಬೆಂಗಳೂರು ರೋಸ್ ಈರುಳ್ಳಿ ರಪ್ತು ಅಲ್ಲದೇ ಆಂಧ್ರಪ್ರದೇಶದ ಕೃಷ್ಣಾಪುರಂ ಈರುಳ್ಳಿಯನ್ನು ರಪ್ತು ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ.

     ಇನ್ನು ಬೆಂಗಳೂರು ರೋಸ್ ಈರುಳ್ಳಿಯನ್ನು ರಪ್ತು ಮಾಡಲು ಕೃಷಿ ಇಲಾಖೆಯ ಕಮೀಷನರ್ ನಿಂದ ರಪ್ತು ಮಾಡುವವರು ಅನುಮತಿಯನ್ನು ಪಡೆಯಬೇಕು. ಹೀಗೆ ಪಡೆದಂತ ಸೆರ್ಟಿಫಿಕೇಟ್ ಅನ್ನು ಹೆಚ್ಚುವರಿ ಡಿಜಿಎಫ್ ಟಿ ಅಧಿಕಾರಿಗಳಿಂದ ರಿಜಿಸ್ಟರ್ ಮಾಡಿಸಿರಬೇಕು ಎಂಬುದಾಗಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap