ಹರಿಹರ : ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು!!

ಹರಿಹರ:

      ನಗರದ ಶಿವಮೊಗ್ಗ-ಹೊಸಪೇಟೆ ಹೆದ್ದಾರಿ ರೈಲ್ವೆ ಅಂಡರ್ ಬ್ರಿಡ್ಜ್‍ನಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ.

      ನಗರದ ಎ.ಕೆ.ಕಾಲೋನಿ 3ನೇ ಕ್ರಾಸ್ ವಾಸಿ ಕಾರು ಚಾಲಕ ಅಣ್ಣಪ್ಪ ಎಸ್.ಜೆ. ಇವರ ಪುತ್ರ ಧನಂಜಯ್ (19) ಮೃತ ದುರ್ದೈವಿ. ಧನಂಜಯ್ ದಾವಣಗೆರೆ ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ.

ಘಟನೆಯ ವಿವರ:

      ಟ್ಯೂಷನ್‍ಗೆ ಹೋಗಿದ್ದ ತನ್ನ ಸಹೋದರಿ ಐಶ್ವರ್ಯಳನ್ನು ಬೈಕ್‍ನಲ್ಲಿ ಮನೆಗೆ ಕರೆದುಕೊಂಡು ಬರುವಾಗ ಬೆಳಿಗ್ಗೆ 8.10ಕ್ಕೆ ಈ ಘಟನೆ ನಡೆದಿದೆ. ತನ್ನ ಮುಂದೆ ಸಾಗುತ್ತಿದ್ದ ಬೈಕ್‍ಗೆ ಮೃತನ ಬೈಕ್ ಡಿಕ್ಕಿಯಾಗಿದೆ. ನಂತರ ಧನಂಜಯ್ ಹಾಗೂ ಐಶ್ವರ್ಯ ರಸ್ತೆಗೆ ಉರುಳಿ ಬಿದ್ದಿದ್ದಾರೆ.

      ಆಗ ಹರಪನಹಳ್ಳಿ ಕಡೆಯಿಂದ ಗಾಂಧಿ ವೃತ್ತದ ಕಡೆಗೆ ಅತಿವೇಗವಾಗಿ ಬರುತ್ತಿದ್ದ ಇಟ್ಟಿಗೆ ಲೋಡಿನ ಸ್ವರಾಜ್ ಮಜ್ಡಾ ಲಾರಿಯು ರಸ್ತೆಗೆ ಬಿದ್ದಿದ್ದ ಧನಂಜಯ್ ಮೇಲೆ ಹರಿದಿದೆ. ಆಗ ಧನಂಜಯ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಸಹೋದರಿ ಐಶ್ವರ್ಯಳನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅಪಘಾತದ ಕಾರಣದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link