ಹಾಸನ :
ರೌಡಿ ಶೀಟರ್ ಒಬ್ಬರನ್ನು ಬಂಧಿಸಲು ತೆರಳಿದ್ದಂತ ಪಿಎಸ್ಐ ಮೇಲೆಯೇ ರೌಡಿ ಶೀಟರ್ ಚೂರಿಯಿಂದ ಇರಿದು, ಗಾಯಗೊಳಿಸಿದ್ದಾನೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದಂತ ಮೂವರು ಯುವಕರ ಮೇಲೆ ಚೂರಿ ಇರಿತದ ಪ್ರಕರಣದಲ್ಲಿ ರೌಡಿ ಶೀಟರ್ ಸುನಿಲ್ ಬಂಧಿಸಲು, ಪಿಎಸ್ಐ ತೆಳರಿದ್ದರು. ಈ ವೇಳೆ ಪಿಎಸ್ಐಗೆ ಚೂರಿಯಿಂದ ಇರಿದು, ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ, ಹಾಸನ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ್ ಆರೋಪಿಯ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ಶೀಟರ್ ಸುನಿಲ್ ಹಾಗೂ ಪಿಎಸ್ ಐ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/11/Police.jpg)