ಡಿಕೆಶಿಗೆ ಜೈಲಿನಲ್ಲಿ ಟಿವಿ, ಕುರ್ಚಿಗೆ ಅನುಮತಿ!!

ನವದೆಹಲಿ :

      ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್​ಜೈಲುಪಾಲಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ನ್ಯಾಯಾಧೀಶರು ಕುರ್ಚಿ ಮತ್ತು ಟಿವಿ ನೀಡುವಂತೆ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

       ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ನಡೆದ ಅರ್ಜಿ ವಿಚಾರಣೆಯಲ್ಲಿ ತಿಹಾರ್‌ ಜೈಲಿನಲ್ಲಿ ಅವರನ್ನು ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಒಂದು ಚೇರ್‌ ಸಹ ನೀಡದೆ ವಿಚಾರಣೆ ನಡೆಸಿದ್ದಾರೆ. ಇದರಿಂದ ಅವರಿಗೆ ಸೊಂಟ ಮತ್ತು ಬೆನ್ನು ನೋವು ಬಂದಿದೆ. ಹೀಗಾಗಿ ಕುಳಿತುಕೊಳ್ಳಲು ಕುರ್ಚಿ ನೀಡಬೇಕು. ಬ್ಯಾರಕ್‌ ಹೊರಗೆ ಲೈಬ್ರರಿ ಇದೆ ಅಲ್ಲೂ ಕುಳಿತುಕೊಳ್ಳಲು ಕುರ್ಚಿ ನೀಡುತ್ತಿಲ್ಲ,” ಎಂಬುದಾಗಿ ನ್ಯಾಯಾಧೀಶರ ಬಳಿ ಶಿವಕುಮಾರ್‌ ವಕೀಲರು ದೂರಿದರು.

       ಕುರ್ಚಿ ನೀಡಲು ಡಾಕ್ಟರ್‌ ಸಲಹೆ ನೀಡಿದ್ದಾರೆಂದು ಶಿವಕುಮಾರ್‌ ಇದೇ ಸಂದರ್ಭ ನ್ಯಾಯಾಧೀಶರ ಗಮನಕ್ಕೆ ತಂದರು. ನಾನು 30 ವರ್ಷಗಳ ಕೆಳಗೆ ಬಂದೀಖಾನೆ ಸಚಿವನಾಗಿದ್ದೆ. ಬಂದೀಖಾನೆಯ ನಿಯಮಗಳ ಬಗ್ಗೆ ನನಗೆ ತಿಳಿದಿದೆ ಎಂದ ಶಿವಕುಮಾರ್‌, ನನಗೆ ಬೇರೆ ವಿನಾಯಿತಿ ಬೇಡ ಕುರ್ಚಿ ಬೇಕೆಂದು ಕೇಳಿದರು.

       ಈ ಬೇಡಿಕೆಗೆ ಮನ್ನಿಸಿರುವ ಸಿಬಿಐ ಕೋರ್ಟ್ ಡಿಕೆ ಶಿವಕುಮಾರ್ ಅವರಿಗೆ ಟಿವಿ, ಕುರ್ಚಿ ವ್ಯವಸ್ಥೆಗೆ ಅನುಮತಿ ನೀಡಿತು. ಅಲ್ಲದೇ ಜಾಮೀನು ನೀಡಲು ನಿರಾಕರಿಸಿ, ಅಕ್ಟೋಬರ್ 25ರ ವರೆಗೆ ಮತ್ತೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

      

Recent Articles

spot_img

Related Stories

Share via
Copy link
Powered by Social Snap