ಚುನಾವಣಾ ಪ್ರಚಾರದಿಂದ HDK ಗೆ ಅನಾರೋಗ್ಯ : ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ!

ಬೆಂಗಳೂರು :

      ಮಾಜಿ ಮುಖ್ಯಮಂತ್ರಿ‌ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯವುಂಟಾಗಿರುವ ಕಾರಣ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

      ಹವಾಮಾನ ವೈಪರೀತ್ಯದಿಂದ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಸತತ ತೊಡಗಿಸಿಕೊಂಡಿದ್ದರಿಂದ ಜ್ವರ, ನೆಗಡಿ ಕೆಮ್ಮು ತೀವ್ರವಾಗಿದೆ. ಉಂಟಾಗಿದೆ. ಕಳೆದ‌ಮೂರು ದಿನಗಳ‌ ಹಿಂದೆಯೇ ಚಿಕ್ಕಬಳ್ಳಾಪುರ ಪ್ರಚಾರದಲ್ಲಿ ಭಾಗಿಯಾಗಿದ್ದಾಗಲೇ ಗಂಟಲು ಕೆರೆತ ಶೀತವುಂಟಾಗಿತ್ತು. ವಿಶ್ರಾಂತಿ ರಹಿತ‌ ಸುತ್ತಾಟ, ಭಾಷಣದಿಂದ ಜ್ವರ ಹೆಚ್ಚಾಗಿದ್ದು, ಜಯದೇವ ಆಸ್ಪತ್ರೆಯಲ್ಲಿ ವೈದ್ಯರಿಂದ ಬುಧವಾರ ತಪಾಸಣೆಗೊಳಗಾದರು.

      ಸುಮಾರು ಅರ್ಧಗಂಟೆ ಕುಮಾರಸ್ವಾಮಿ ಅವರನ್ನು ಪರಿಶೀಲಿಸಿದ ವೈದ್ಯರು 4 ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ವೈದ್ಯಕೀಯ ತಪಾಸಣೆ ಬಳಿಕ ಅವರು ತಮ್ಮ ಜೆ.ಪಿ‌ ನಗರದ ನಿವಾಸಕ್ಕೆ ಮರಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap