ತಂಗಿಯ ಮದುವೆಗೆ ಹೋಗಲು ರಜೆ ಸಿಗದೆ ನೊಂದ ಅಣ್ಣ ನೇಣಿಗೆ ಶರಣು!!

ರೋಹತಕ್​ ​: 

      ತಂಗಿಯ ಮದುವೆಗೆ ಹೋಗಲು ವಿಭಾಗದ ಮುಖ್ಯಸ್ಥರು ರಜೆ ನೀಡದ ಕಾರಣ ನೊಂದ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಧಾರವಾಡ ಮೂಲದ ಓಂಕಾರ್​(30) ಆತ್ಮಹತ್ಯೆ ಮಾಡಿಕೊಮಡ ವೈದ್ಯಕೀಯ ವಿದ್ಯಾರ್ಥಿ. ಹರಿಯಾಣಾದ ರೋಹತಕ್​​ನಲ್ಲಿರುವ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಎಂಡಿ ಓದುತ್ತಿದ್ದ ವಿದ್ಯಾರ್ಥಿಯು ತನ್ನ ಸಹೋದರಿ ಮದುವೆಗೆ ಹೋಗಲು ರಜೆ ಕೇಳಿದ್ದರು. ಆದರೆ, ವೈದ್ಯರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಭಾಗದ ಮುಖ್ಯಸ್ಥರು ರಜೆ ನಿರಾಕರಿಸಿದ್ದರು.

     ಇದರಿಂದ ನೊಂದ ಓಂಕಾರ್​ ಹಾಸ್ಟೆಲ್​ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಓಂಕಾರ್​ ಆತ್ಮಹತ್ಯೆಗೂ ಮುನ್ನ ಯಾವುದೇ ಪತ್ರ ಬರೆದಿಲ್ಲ, ಆದರೆ ಸಹಪಾಠಿಗಳು ಹೇಳುವ ಪ್ರಕಾರ ಅವರು ಹೆಚ್​ಒಡಿಯಿಂದ ಕಿರುಕುಳ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ.

      ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಡಿ ಕಾಲೇಜಿನ ವಿಭಾಗ ಮುಖ್ಯಸ್ಥೆ ವಿರುದ್ಧ ಸೆಕ್ಷನ್ 306ರಡಿ ಕೇಸು ದಾಖಲಿಸಲಾಗಿದೆ. ಈ ಮಧ್ಯೆ ಕಿರುಕುಳ ನೀಡುತ್ತಿದ್ದ ವೈದ್ಯೆಯನ್ನು ತಕ್ಷಣವೇ ಬಂಧಿಸಬೇಕೆಂದು ಓಂಕಾರ್ ಅವರ ಸಹೋದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

))

Recent Articles

spot_img

Related Stories

Share via
Copy link
Powered by Social Snap