ನೆಲಮಂಗಲ : ಮಕ್ಕಳಾಗಲು ದಂಪತಿಯಿಂದ ಮಾತ್ರೆ ಸೇವನೆ : ಪತಿ ಸಾವು!!

ಬೆಂಗಳೂರು: 

       ಗರ್ಭದಾರಣೆಗಾಗಿ ಮಾತ್ರೆ ನೀಡುವ ಜಾಹೀರಾತು ನೋಡಿ ಅವರಿಂದ ದಂಪತಿ ಮಾತ್ರೆಗೆ ತೆಗೆದುಕೊಂಡಿದ್ದು, ಪರಿಣಾಮ ಪತಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

     ನೆಲಮಂಗಲದ ಅರಿಶಿನಕುಂಟೆ ಗ್ರಾಮದ ನಿವಾಸಿಗಳಾದ ಶಶಿಧರ್ ಹಾಗೂ ಪತ್ನಿ ಗಂಗಾಂಬಿಕಾ ಜೋಡಿ 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಇದೂವರೆಗೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಪತಿ ಗ್ರಾಹಕ ತಿಳಿಸಿದ ವೈದ್ಯರಿಗೆ ಕರೆ ಮಾಡಿ ತಮಗೆ ಮಕ್ಕಳಾಗುವಂತೆ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆ ಬಳಿಕ ವೈದ್ಯರ ಜೊತೆ ಮೂವರು ಅಪರಿಚಿತರು ಕಾರಿನಲ್ಲಿ ಶಶಿಧರ್ ಅಂಗಡಿ ಬಳಿ ಭಾನುವಾರ ರಾತ್ರಿ ಬಂದಿದ್ದಾರೆ.

      ಹೀಗೆ ಬಂದವರು ನಿಮಗೆ ಮಕ್ಕಳಾಗುತ್ತದೆ ಈ ಮಾತ್ರೆಗಳನ್ನು ಸೇವಿಸಿ ಎಂದು ಸಲಹೆ ನೀಡಿ ಮಾತ್ರೆಗಳನ್ನು ಕೊಟ್ಟು ಹೋಗಿದ್ದಾರೆ. ಅಲ್ಲದೆ ಚಿಕಿತ್ಸೆಯ ವೆಚ್ಚ 25,000 ಎಂದು ಬೇಡಿಕೆ ಇಟ್ಟಿದ್ದಾರೆ. ಶಶಿಧರ್ ಮೂವರ ಬಳಿಯಿಂದ 2 ಮಾತ್ರೆ ತೆಗೆದುಕೊಂಡು ಅವರಿಗೆ ತನ್ನ ಕೈಯಲ್ಲಿದ್ದ 2 ಸಾವಿರ ಹಣವನ್ನು ನೀಡಿದ್ದಾರೆ. ಹಣ ಕಡಿಮೆ ನೀಡಿದ್ದರಿಂದ ಸಿಟ್ಟುಗೊಂಡ ಮೂವರು, ನಾಳೆ ಮತ್ತೆ ಹಣ ಕೊಡಬೇಕು, ನಾವು ಬರುತ್ತೇವೆ ಎಂದು ಹೇಳಿ ತೆರಳಿದ್ದಾರೆ. ಮೂವರ ಮಾತು ನಂಬಿದ ದಂಪತಿ ಭಾನುವಾರವೇ ರಾತ್ರಿ ಮಾತ್ರೆ ಸೇವಿಸಿದ್ದಾರೆ.

       ಮಾತ್ರೆ ಸೇವಿಸಿದ ಬಳಿಕ ದಂಪತಿಗಳು ಭಾನುವಾರ ರಾತ್ರಿ ಭೇದಿಯಿಂದ ಬಳಲುತ್ತಿದ್ದರು. ಹೀಗಾಗಿ ಸ್ಥಳೀಯರು ಈ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಶಶಿಧರ್ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಗಂಗಾಂಬಿಕ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇನ್ನು, ಮೃತ ಶಶಿಧರ್ಗೆ ನೆಲಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

       ಈ ಘಟನೆಗೆ ಸಂಬಂಧಪಟ್ಟಂತೆ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap