‘ಯಾರ ಜೊತೆ ಬೇಕಾದರೂ ಕೈ ಜೋಡಿಸಲು ಸಿದ್ಧ’ – ಹೆಚ್ಡಿಕೆ!!

ಬೆಂಗಳೂರು: 

     ‘ಮಧ್ಯಂತರ ಚುನಾವಣೆ ತಪ್ಪಿಸಲು ಯಾರ ಜೊತೆ ಬೇಕಾದರೂ ಕೈ ಜೋಡಿಸಲು ಸಿದ್ದನಿದ್ದೇನೆ’ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿ ಯಿಂದ ಜನ ಬೀದಿಗೆ ಬಂದಿದ್ದಾರೆ. ಅವರ ಕಷ್ಟಗಳಿಗೆ ಸ್ಪಂದಿಸಬೇಕಾದರೆ ಸರ್ಕಾರ ಅಸ್ತಿತ್ವದಲ್ಲಿರಬೇಕು. ಮಧ್ಯಂತರ ಚುನಾವಣೆಯಾಗಲಿ, ರಾಷ್ಟ್ರಪತಿ ಆಳ್ವಿಕೆಯಾಗಲಿ ಜಾರಿಯಾಗುವುದು ಬೇಡ. ಹಾಗಾಗಿ ತಾವು ಮಧ್ಯಂತರ ಚುನಾವಣೆ ತಪ್ಪಿಸಲು ಯಾರ ಜೊತೆ ಬೇಕಾದರೂ ಕೈ ಜೋಡಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

      ಬಿ.ಎಸ್.ಯಡಿಯೂರಪ್ಪನವರಿಗೆ ಬೆಂಬಲ ಕೊಡುತ್ತೇನೆಂದು ನಾನು ಹೇಳಿಲ್ಲ. ಯಾರು ನನ್ನ ಜನರನ್ನು ಉಳಿಸ್ತಾರೋ, ಆ ಮುಖ್ಯಮಂತ್ರಿಗೆ ನಾನು ಬೆಂಬಲ ಕೊಡುತ್ತೇನೆ. ನಾನು ಹೇಳಿದ ರೀತಿ ನನ್ನ ಜನರಿಗೆ ಪರಿಹಾರ ನೀಡಿದ್ರೆ, ಸಿದ್ದರಾಮಯ್ಯನವರಿಗೂ ಬೆಂಬಲ ಕೊಡುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap