ವಾಸ್ತುದೋಷ : ಮತಯಂತ್ರವನ್ನೇ ತಿರುಗಿಸಿ ವೋಟ್ ಮಾಡಿದ JDS ಅಭ್ಯರ್ಥಿ!!

ಮೈಸೂರು :

     ವಾಸ್ತು ಪ್ರಕಾರ ಸರಿಯಾದ ದಿಕ್ಕಿಗೆ ಇಟ್ಟಿಲ್ಲ ಎಂದು ಆರೋಪಿಸಿ ಕೆ.ಆರ್. ಪೇಟೆ ಜೆಡಿಎಸ್ ಅಭ್ಯರ್ಥಿ ಮತಯಂತ್ರವನ್ನು ತಿರುಗಿಸಿ ಮತದಾನ ಘಟನೆ ಇಂದು ನಡೆದಿದೆ.

        ಕೆ.ಆರ್. ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಕೆ.ಆರ್.ಪೇಟೆಯ ಹುಟ್ಟೂರು ಬಂಡಿಹೊಳೆಗೆ ಕುಟುಂಬ ಸಮೇತರಾಗಿ ಮತಗಟ್ಟೆ 151 ರಲ್ಲಿ ಮತದಾನ ಮಾಡಲು ಆಗಮಿಸಿದ ವೇಳೆ, ಚುನಾವಣಾ ಅಧಿಕಾರಿಗಳು ಮತಯಂತ್ರವನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿಗೆ ಇಟ್ಟಿಲ್ಲ ಎಂದು ಆರೋಪಿಸಿ, ಕೂಡಲೇ ಮತಗಟ್ಟೆ ಸಿಬ್ಬಂದಿಗಳನ್ನು ಕರೆದು ಮತಯಂತ್ರವನ್ನು ತಿರುಗಿಸಿ ಮತದಾನ ಮಾಡಿದ್ದಾರೆ.

Karnataka By-Elections 2019: ಮತಯಂತ್ರ ವಾಸ್ತುಪ್ರಕಾರ ಇಲ್ವಂತೆ; ಇವಿಎಂ ಯಂತ್ರವನ್ನೇ ತಿರುಗಿಸಿ ಮತದಾನ ಮಾಡಿ ನಗೆಪಾಟಲಿಗೀಡಾದ ಜೆಡಿಎಸ್ ಅಭ್ಯರ್ಥಿ

      ಬಿ.ಎಲ್​.ದೇವರಾಜು ಅವರಿಗೆ ವಾಸ್ತು ಮೇಲೆ ಅಪಾರ ನಂಬಿಕೆ ಇದ್ದು ಇದೇ ಕಾರಣಕ್ಕೆ ಅವರು  ಮತಯಂತ್ರವನ್ನೇ ತಿರುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

      ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap