ಬಿಜೆಪಿಗೆ ದೇವೇಗೌಡರ ಸವಾಲು!?

ನವದೆಹಲಿ:

      ಮೈತ್ರಿ ಪಕ್ಷದ ಕೆಲವು ಶಾಸಕರು ಕಲಾಪಕ್ಕೆ ಬಂದಿಲ್ಲ ಎಂಬುದರ ಬಗ್ಗೆ ಅನುಮಾನವಿದ್ದರೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ದೇವೇಗೌಡರು ವಿರೋಧಪಕ್ಷ ಬಿಜೆಪಿಗೆ ಸವಾಲೆಸಿದಿದ್ದಾರೆ.

       ಬಿಜೆಪಿಗೆ ನೇರವಾಗಿ ಸವಾಲು ಹಾಕಿರುವ ದೇವೇಗೌಡರು, ಸಮ್ಮಿಶ್ರ ಸರ್ಕಾರದ ಭವಿಷ್ಯ ಸದನದಲ್ಲಿಯೇ ನಿರ್ಧಾರವಾಗಲಿ. ಸರ್ಕಾರಕ್ಕೆ ಬಹುಮತದ ಕೊರತೆಯುಂಟಾಗಿ ಅಲ್ಪ ಮತಕ್ಕೆ ಕುಸಿಯುವಂತಹ ಸ್ಥಿತಿ ಎದುರಾಗಿದ್ದರೆ ಅದನ್ನು ಸದನದಲ್ಲಿ ಅವರು ಸಾಬೀತು ಮಾಡಲಿ, ಬಿಜೆಪಿ ನಾಯಕರಿಗೆ ಶಕ್ತಿಯಿದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದಿದ್ದಾರೆ.

      ಕೆಲವು ಶಾಸಕರು ಅಧಿವೇಶನದಲ್ಲಿ ಭಾಗವಹಿಸಿಲ್ಲ ಎಂಬ ಮಾತ್ರಕ್ಕೆ ಅವರು ಅತೃಪ್ತಿ ಹೊಂದಿದ್ದಾರೆ ಎಂದರ್ಥವಲ್ಲ. ಪ್ರತಿ ಶಾಸಕರಿಗೂ ಒಂದಲ್ಲ ಒಂದು ಕೆಲಸಗಳಿರುತ್ತವೆ. ಆ ಕಾರಣದಿಂದ ಅವರು ಕಲಾಪಕ್ಕೆ ಗೈರು ಹಾಜರಾಗಿರುತ್ತಾರೆ ಎಂದು ಹೇಳಿದ್ದಾರೆ.

  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap