ಕಲಬುರಗಿ:
ಈಜಲು ತೆರಳಿದ ಯುವಕನೋರ್ವ ಇನ್ನೇನು ತೀರ ಸೇರುವಷ್ಟರಲ್ಲಿ ಮುಳುಗಿ ನೀರುಪಾಲಾದ ದಾರುಣ ಘಟನೆ ನಗರದ ಹೊರವಲಯದ ರುಕ್ಮೊದ್ದೀನ್ ಕಲ್ಲಿನ ಖಣಿಯಲ್ಲಿ ನಡೆದಿದೆ.
ಮಿಜುಗುರಿ ಬಡಾವಣೆಯ ಜಾಫರ್ ಅಯೂಬ್(22) ಮೃತ ದುರ್ದೈವಿ. ಜಾಫರ್ ಮತ್ತು ಆತನ ಸ್ನೇಹಿತರು ಕಲಬುರಗಿ ಪಟ್ಟಣದ ಹೊರವಲಯದಲ್ಲಿನ ರಾಣೇಶಪೀರ್ದರ್ಗಾ ಬಳಿಯ ಕಲ್ಲು ಕ್ವಾರಿಯಲ್ಲಿ ಈಜಾಡಲು ತೆರಳಿದ್ದರು. ಜಾಫರ್ ಈಜುತ್ತಿದ್ದರೆ, ಗೆಳೆಯರು ದಂಡೆಯ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದರು. ಆದರೇ ನೋಡನೋಡುತ್ತಿದ್ದಂತೆಯೇ ಜಾಫರ್ ದಂಡೆಯ ಬಳಿ ಬಂದು ಏಕಾಏಕಿ ಜಲಸಮಾಧಿಯಾಗಿದ್ದಾನೆ. ನೀರೊಳಗೆ ಮುಳುಗುತ್ತಿರುವುದನ್ನು ಆತನ ಗೆಳೆಯರು ಕಂಡರೂ ಸಹಾಯ ಹಸ್ತ ಚಾಚಲಿಲ್ಲ.ನೋಡನೋಡುತ್ತಿದ್ದಂತೆಯೇ ಜಾಫರ್ ಜಲಸಮಾಧಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಜಾಫರ್ ಮುಳುಗುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ನೀರೊಳಗೆ ಮುಳುಗುತ್ತಿದ್ದರೂ ಸ್ನೇಹಿತರು ಕೈ ಹಿಡಿದು ದಂಡೆಗೆ ಎಳೆದಿಲ್ಲ. ಸ್ನೇಹಿತರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ