ರಾಜ್ಯದಲ್ಲಿ ಚಿರತೆ ಗಣತಿ : 2500 ಚಿರತೆಗಳ ಪತ್ತೆ..!

ಬೆಂಗಳೂರು :

      ಆನೆ ಮತ್ತು ಹುಲಿ ಗಣತಿ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿರತೆ ಗಣತಿ ನಡೆದಿದೆ. ರಾಜ್ಯದಲ್ಲಿ 2,500 ಚಿರತೆಗಳಿವೆ ಎಂದು ವರದಿ ಮಾಡಿದೆ.

      ವನ್ಯಜೀವಿ ಸಂರಕ್ಷಕ ಸಂಜಯ್ ಗುಬ್ಬಿ ಅವರ ನೇಚರ್ ಕನ್ಸ್​ರ್ವೆಷನ್ ಫೌಂಡೇಷನ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಜಂಟಿಯಾಗಿ ಈ ಗಣತಿ ನಡೆಸಿವೆ. ಸುಮಾರು 6 ವರ್ಷಗಳಿಂದ ಕರ್ನಾಟಕದ ರಕ್ಷಿತಾರಣ್ಯ ಮತ್ತು ಹೊರಭಾಗದ ಕಾಡುಗಳಲ್ಲಿ ಮಾಹಿತಿ ಸಂಗ್ರಹಿಸಿ ಚಿರತೆಗಳ ಗಣತಿ ನಡೆಸಲಾಗಿದೆ.  

      ವನ್ಯಜೀವಿಗಳ ರಕ್ಷಿತಾರಣ್ಯವಾದ ಮಲೆಮಹದೇಶ್ವರ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಸುತ್ತಮುತ್ತ, ತಿಮ್ಲಾಪುರ ಸಂರಕ್ಷಿತ ಪ್ರದೇಶದಲ್ಲಿ ಗಣತಿ ಮಾಡಲಾಗಿದೆ.

      ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ತುಮಕೂರು, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಭದ್ರಾವತಿ, ಬಳ್ಳಾರಿ, ಚಿತ್ರದುರ್ಗದಲ್ಲೂ ಗಣತಿ ನಡೆಸಲಾಗಿದೆ. 

      ತುಮಕೂರು ಜಿಲ್ಲೆಯ ಬುಕ್ಕಪಟ್ಟಣ, ಸುವರ್ಣಾವತಿ ಪ್ರದೇಶದಲ್ಲಿಯೂ ಚಿರತೆಗಳು ಹೆಚ್ಚಾಗಿವೆ ಎಂದು ಗಣತಿ ವರದಿ ಹೇಳಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸುತ್ತಮತ್ತಲಿನ ಕುಕ್ಕವಾಡಿ, ಹಾದಿಕೆರೆ, ರಂಗಯ್ಯನಗಿರಿ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದೆ.

      ಇನ್ನೊಂದು ವಿಶೇಷವಾದ ಸಂಗತಿಯೆಂದರೆ, ದೇಶದಲ್ಲಿ ಚಿರತೆ ಗಣತಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link