ಕೊಡಗು : ಒಂದೇ ಕುಟುಂಬದ ಮೂವರಿಗೆ ಚೂರಿ ಇರಿದು ವ್ಯಕ್ತಿ ಪರಾರಿ!!

ಕೊಡಗು  :  

     ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂವರಿಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

     ವಿಲ್ಸನ್(45), ಸ್ಟೀವನ್(28) ಹಾಗೂ 17 ವರ್ಷದ ಯುವತಿ ಚಾಕು ಇರಿತಕ್ಕೆ ಒಳಗಾದವರು. ಗ್ರಾಮದ ನಿವಾಸಿ ರಾಮ್​ದಾಸ್​ ಎಂಬಾತ ಈ ಕೃತ್ಯ ನಡೆದಿದ್ದಾನೆ. 

     ಕುಟುಂಬದ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೆ ಏರಿದೆ. ಬಳಿಕ ರೊಚ್ಚಿಗೆದ್ದ ರಾಮ್​ದಾಸ್​ ಎಂಬಾತ ಮೂವರಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಮೊದಲು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಮಡಿಕೇರಿ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

     ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ಪರಾರಿಯಾಗಿರುವ ರಾಮ್​ದಾಸ್​ನನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap