ಕೊರೊನಾ ಸಂಕಷ್ಟ : ಫೇಸ್’ಬುಕ್ ನಲ್ಲಿ ಕಿಡ್ನಿ ಮಾರಾಟಕ್ಕಿಟ್ಟ ಸಾರಿಗೆ ನೌಕರ..!

ಕೊಪ್ಪಳ :  

      ಜೀವನ ನಿರ್ವಹಣೆಗಾಗಿ ಸಾರಿಗೆ ನೌಕರನೊಬ್ಬ ಕಿಡ್ನಿ ಮಾರಾಟಕ್ಕೆ ಮುಂದಾಗಿರುವ ಘಟನೆ ನಡೆದಿದೆ.

     ಕೊರೊನಾ ವೈರಸ್ ಪರಿಣಾಮ ಸಾರಿಗೆ ನೌಕರರು ಕಂಗೆಟ್ಟಿದ್ದು, ಸರಿಯಾದ ವೇತನವಿಲ್ಲದೇ ದಿನ ನಿತ್ಯದ ಜೀವನ ನಡೆಸಲು ಸಹ ಕಷ್ಟಕರವಾಗಿದೆ.

      ಹೀಗಾಗಿ ಇದರಿಂದ ಬೇಸತ್ತ ಸಾರಿಗೆ ಇಲಾಖೆಯ ನೌಕರರೊಬ್ಬರು ತಮ್ಮ ಕಿಡ್ನಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಕೊಪ್ಪಳದ ಗಂಗಾವತಿ ಡಿಪೋದಲ್ಲಿ ನಿರ್ವಾಹಕರಾಗಿರುವ ಹನುಮಂತ ಕಲೇಗಾರ ಎಂಬುವರು ಫೇಸ್ ಬುಕ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ನಾನು ಒಬ್ಬ ಸಾರಿಗೆ ನೌಕರ ಮನೆ ಬಾಡಿಗೆ ರೇಷನ್ ತರುವುದಕ್ಕೆ ಹಣ ಇಲ್ಲ. ಆದ್ರೆ ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದುಕೊಂಡಿದ್ದಾರೆ.

      ಇದರೊಂದಿಗೆ ಫೋನ್​ ನಂಬರ್​ ಸಹ ಬರೆದಿದ್ದಾರೆ. ಈ ಮೂಲಕ ಸರ್ಕಾರದ ಹನುಮಂತಪ್ಪ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap