ಕಲಬುರಗಿ : ಮಾಜಿ ಸಚಿವರ ಅಣ್ಣನ ಮಗನ ಬರ್ಬರ ಹತ್ಯೆ!!

ಕಲಬುರಗಿ: 

     ಮಾಜಿ ಸಚಿವ ದಿll ಸಿ.ಗುರುನಾಥ ಅವರ ಸೋದರನ ಪುತ್ರನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಬಾದ ತಾಲೂಕಿನ ಮಾಲಗತ್ತಿ-ಶಂಕರವಾಡಿಯ ರಘೋಜಿ ಫ್ಯಾಕ್ಟರಿ ಬಳಿ ನಡೆದಿದೆ.

      ಸತೀಶ್ ಕಂಬಾನೋರ (42) ಹತ್ಯೆಯಾದ ವ್ಯಕ್ತಿ. ಇಂದು ಬೆಳಗ್ಗೆ ಸತೀಶ್ ಬೈಕ್ ಮೇಲೆ ಹೋಗುವಾಗ ಬೆನ್ನಟ್ಟಿದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

      ಕೆಲ ದಿನಗಳ ಹಿಂದೆ ಸತೀಶ್‌ ರ ಸಹೋದರ ಹಾಗೂ ಶಹಬಾದ್ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೋರ ಮೇಲೂ ಕೊಲೆ ಯತ್ನ ನಡೆದಿತ್ತು ಎಂದು ತಿಳಿದು ಬಂದಿದೆ. 

      ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಹಳೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ‌ ಈ ಕೊಲೆ ನಡೆದಿದೆ ಎನ್ನಲಾಗಿದೆ. 

       ಇನ್ನು ಸ್ಥಳಕ್ಕೆ ಶಹಬಾದ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap