ಬೆಂಗಳೂರು :
ನಾಳೆ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕರ್ಫ್ಯೂ ಹಾಗೂ ಲಾಕ್ಡೌನ್ ಇರಲಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಲಾಕ್ಡೌನ್ ಸಮಯದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.
‘ಬೆಂಗಳೂರು ಜನರು ಈಗಾಗಲೇ ಲಾಕ್ಡೌನ್ಗಳನ್ನು ನೋಡಿದ್ದಾರೆ. ಅವರಿಗೆ ಈ ಲಾಕ್ಡೌನ್ ಹೊಸದಲ್ಲ. ಲಾಕ್ಡೌನ್ ಭದ್ರತೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಬಾರದು’ ಎಂದೂ ಹೇಳಿದರು.
‘ಅಗತ್ಯ ವಸ್ತುಗಳು, ತರಕಾಡಿ, ದಿನಸಿ ಅಂಗಡಿಗಳು ಯಥಾಪ್ರಕಾರ ಇರಲಿವೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ತೆರೆದಿರಲಿವೆ. ಹೋಟೆಲ್ಗಳೂ ಇರಲಿದ್ದು, ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಮಾಂಸದ ಅಂಗಡಿಗಳಿಗೂ ಅವಕಾಶ ನೀಡಲಾಗಿದೆ’ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/india-fights-covid-19-odisha-govt-to-impose-lockdown-in-bhubaneswar-bhadrak-starting-from-8-pm-tonight.gif)