ಚಿಕ್ಕಬಳ್ಳಾಪುರ : ನಿಂತಿದ್ದ ಕಾರುಗಳಿಗೆ ಲಾರಿ ಡಿಕ್ಕಿ : ನಾಲ್ವರ ಸಾವು!!

ಚಿಕ್ಕಬಳ್ಳಾಪುರ : 

     ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿಹೊಡೆದ ಪರಿಣಾಮ ನಾಲವರು ಮೃತಪಟ್ಟ ಘಟನೆ ತಾಲೂಕಿನ ಚದಲಪುರ ಕ್ರಾಸ್​ ಬಳಿ ನಡೆದಿದೆ.

      ಚಿಕ್ಕಬಳ್ಳಾಪುರ ತಾಲೂಕಿನ ಗವಿಗಾನಹಳ್ಳಿಯ ಕಲಾನಂಜಿಯಂ​, ಯಮುನಾಚಾರಿ, ವೆಂಕಟೇಶ್​ ಜಿಪಿ, ನಿತೀಶ್​ಗೌಡ ಮೃತ ದುರ್ದೈವಿಗಳು.

      ಬೆಂಗಳೂರಿನಿಂದ ಬಂದಿದ್ದ ಕಂಟೇನರ್ ಲಾರಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ​ಕಾರ್​ಗೆ ಗುದ್ದಿದೆ. ನಂತರ ಅಲ್ಲೇ ಪಕ್ಕದಲ್ಲಿದ್ದ ಕಾರಿಗೂ ಡಿಕ್ಕಿಹೊಡೆದು ನಂದಿನಿ ಪಾರ್ಲರ್​ ಒಂದಕ್ಕೆ ನುಗ್ಗಿದೆ. ಪರಿಣಾಮ ಕಾರುಗಳೆರಡೂ ಸಂಪೂರ್ಣ ಜಖಂ ಆಗಿದ್ದು, ಕಾರಿ​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

     ಘಟನೆಯಲ್ಲಿ 6 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ. 

    ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ಸಿಪಿಐ ಪ್ರಶಾಂತ್ ಹಾಗೂ ‌ನಂದಿ‌ ಪೋಲಿಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link