ಬೆಂಗಳೂರು :
ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಹತ್ಯೆಗೆ ಯತ್ನ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಭೈರತಿ ಗ್ರಾಮದಲ್ಲಿ ಭೈರತಿ ಸುರೇಶ್ ಅವರ ಮೇಲೆ ಗ್ರಾಮದ ಶಿವು ಎಂಬಾತ ಚಾಕು ಇರಿದಿದ್ದು, ಸುರೇಶ್ ಅವರು ಇಂದು ಭೈರತಿ ಗ್ರಾಮಕ್ಕೆ ತೆರಳಿದ್ದ ವೇಳೆ, ಗ್ರಾಮದ ಶಿವು ಎಂಬಾತ ಏಕಾಏಕಿ ಸುರೇಶ್ ಅವರ ಬಳಿ ಬಂದು ಚಾಕು ಇರಿದಿದ್ದಾನೆ ಎನ್ನಲಾಗಿದೆ.
ಗಾಯಗೊಂಡಿದ್ದ ಭೈರತಿ ಸುರೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸೆರೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಶಿವು ಭೈರತಿ ಸುರೇಶ್ ಅವರಿಗೆ ಪರಿಚಿತನೇ ಆಗಿದ್ದ ಎನ್ನಲಾಗಿದೆ. ರಾಜಕೀಯ ದುರುದ್ದೇಶದಿಂದ ಈ ಹತ್ಯೆ ಯತ್ನ ನಡೆದಿಲ್ಲ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ದಾಳಿ ನಡೆಸಿದ್ದಾನೆಂದು ಗೊತ್ತಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/bhairathi-suresh.gif)