ಬೆಳಗಾವಿ :
ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿ ಸಾವನಪ್ಪಿದ ಘಟನೆ ನಡೆದಿದೆ.
ಹುಲಗಬಾಳಿ ಗ್ರಾಮದ ಮಾರುತಿ ಜಾಧವ್(38) ಸಾವನಪ್ಪಿದ ವ್ಯಕ್ತಿ. ವರು ವಾಸವಾಗಿದ್ದ ತೋಟದ ವಸತಿ ಸ್ಥಳ ಪ್ರವಾಹ ಪೀಡಿತವಾಗಿದ್ದರಿಂದ ನಿನ್ನೆ ಮಾರುತಿ ಹರಿಬಾ ಜಾಧವ್ ಹಾಗೂ ಕುಟುಂಬದವರನ್ನು ಜಿಲ್ಲಾಡಳಿತ ಅಲ್ಲಿಂದ ಸ್ಥಳಾಂತರಿಸಿತ್ತು. ಆದರೆ ಜಾನುವಾರುಗಳನ್ನು ಅಲ್ಲಿಯೇ ಬಿಡಲಾಗಿತ್ತು. ಇಂದು ದನಕರುಗಳಿಗೆ ಮೇವು ಹಾಕಲು ಹೋಗುವುದಾಗಿ ಮಾರುತಿ ಅವರು ಈಜಿಕೊಂಡೇ ತೋಟಕ್ಕೆ ಹೋಗಿದ್ದರು. ಆದರೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಾರುತಿ ಜಾಧವ್ ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎನ್ನಲಾಗಿದೆ. ವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/08/krishna-river-flood.gif)