ಮಹಾಲಿಂಗಪುರ :
ಸೇತುವೆಯನ್ನು ಬೈಕ್ ಮೇಲೆ ದಾಟುವಾಗ ಯುವಕ ಘಟಪ್ರಭಾ ನದಿ ಪಾಲಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಯುವಕ ರಮೇಶ್ ದುಂಡಪ್ಪ ಬಸರಗಿ (25) ನೀರು ಪಾಲಾದ ಯುವಕ. ತುಂಬಿ ಹರಿಯುತ್ತಿದ್ದ ಭೀಮಾ ನದಿಯ ಉಮರಾಣಿ-ಲವಗಿ ಬ್ಯಾರೇಜ್ನಲ್ಲಿ (ಅಣೆಕಟ್ಟು) ಈ ಘಟನೆ ನಡೆದಿದೆ.
ತಂದೆ ದುಂಡಪ್ಪ ಬಸರಗಿ ಜೊತೆ ಸಂಬಂಧಿಕರ ಅಂತ್ಯಕ್ರಿಯೆಗೆ ಮಹಾರಾಷ್ಟ್ರಕ್ಕೆ ರಮೇಶ್ ಹೋಗಿದ್ದನು. ಮಹಾರಾಷ್ಟ್ರದಿಂದ ವಾಪಸ್ ಬರುವಾಗ ಈ ಘಟನೆ ನಡೆದಿದೆ.
ಭೀಮಾ ನದಿ ತುಂಬಿ ಹರಿಯುತ್ತಿದ್ದರಿಂದ ನಡೆದುಕೊಂಡು ತಂದೆ ಅಣೆಕಟ್ಟು ದಾಟಿದ್ದಾರೆ. ಆದರೆ ಮಗ ಬೈಕ್ನಲ್ಲಿ ಬ್ಯಾರೇಜ್ ದಾಟುವಾಗ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇದುವರೆಗೂ ಯುವಕ ಪತ್ತೆಯಾಗಿಲ್ಲ.
ಘಟಪ್ರಭಾ ನದಿಗೆ ಪ್ರವಾಹ ಬಂದು ಕಳೆದ 3 ದಿನಗಳಿಂದ ನಂದಗಾಂವ-ಅವರಾದಿ, ಮಿರ್ಜಿ-ಅಕ್ಕಿಮರಡಿ ಸೇತುವೆಗಳು ಜಲಾವೃತವಾಗಿವೆ. ತಾಲೂಕು ಆಡಳಿತ ಇನ್ನು ಕೂಡ ಯುವಕನ ಶೋಧ ಕಾರ್ಯ ಆರಂಭಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
