‘ಎಂಟಿಬಿ ನಾಗರಾಜ್ ಸೋಲಲು ನಾನೇ ಕಾರಣ’-ಶರತ್ ಬಚ್ಚೇಗೌಡ

ಬೆಂಗಳೂರು :

       ಎಂಟಿಬಿ ನಾಗರಾಜ್ ಸೋಲಿಗೆ ನಾನು ಕಾರಣವೇ ವಿನಹ, ನನ್ನ ತಂದೆಯವರು ಅಲ್ಲ ಎಂಬುದಾಗಿ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.

       ಉಪ ಚುನಾವಣೆಯ ಫಲಿತಾಂಶದ ಬಳಿಕ ಹೊಸಕೋಟೆಯ ಬಿಜೆಪಿಯ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ನಾನು ಸೋಲಲು ಬಿಜೆಪಿ ಸಂಸದ ಬಚ್ಚೇಗೌಡರೇ ಕಾರಣ ಎಂಬುದಾಗಿ ಸಿಎಂ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದರು. ಅಲ್ಲದೇ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕ್ಕೂ ವರಿಷ್ಠರ ಮೂಲಕ ಆಗ್ರಹಿಸಲು ಒತ್ತಾಯಿಸಿದ್ದರು. ಆದ್ರೇ ಸಿಎಂ ಮಾತ್ರ ಅವರು ಕಾರಣವೇ ಅಲ್ಲ ಎಂಬುದಾಗಿ ಹೇಳುತ್ತಲೇ ಬಂದಿದ್ದರು.

      ಇದೀಗ ಈ ಕುರಿತಂತೆ ಹಲವು ದಿನಗಳ ಬಳಿಕ ಪ್ರತಿಕ್ರಿಯಿಸಿರುವ ಹೊಸಕೋಟೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವ ಸಾಧಿಸಿದ ಶರತ್ ಬಚ್ಚೇಗೌಡ, ಹೊಸಕೋಟೆ ಕ್ಷೇತ್ರದ ಮತದಾರರು ಸ್ವಾಭಿಮಾನಕ್ಕೆ ಮನ್ನಣೆ ನೀಡಿ ನನಗೆ ಮತ ಹಾಕಿದ್ದಾರೆ. ಹೀಗಾಗಿ ನಾನು ಗೆಲುವು ಸಾಧಿಸಿದ್ದೇನೆ. ಆದ್ದರಿಂದ ಎಂಟಿಬಿ ಸೋಲಿಗೆ ನಾನೇ ಕಾರಣ ಹೊರತು ನಮ್ಮ ತಂದೆಯಲ್ಲ. ನನ್ನ ಗೆಲುವಿಗೂ, ನನ್ನ ತಂದೆಗೂ ಸಂಬಂಧವಿಲ್ಲ. ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಎಂಟಿಬಿ ನಾಗರಾಜ್ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap