ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ತಮ್ಮ ಮನೆಗೆ ಬರುವ ಎಲ್ಲರಿಗೂ ಮೊಬೈಲ್ ತರದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೌದು, ಮುಖ್ಯಮಂತ್ರಿ ಯಡಿಯೂರಪ್ಪ ಹುಬ್ಬಳ್ಳಿಯ ಪಕ್ಷದ ಸಭೆಯಲ್ಲಿ ಆಡಿದ ಮಾತು, ಆಡಿಯೋ ರೂಪದಲ್ಲಿ ಲೀಕ್ ಆಗಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಅಲ್ಲೋಲ, ಕಲೋಲ್ಲ ಸೃಷ್ಟಿ ಮಾಡಿದೆ. ಆಡಿಯೋ ಲೀಕ್ ಬಳಿಕ ಎಚ್ಚೆತ್ತುಕೊಂಡಿರುವ ಸಿಎಂ ಬಿಎಸ್ವೈ ತಮ್ಮ ನಿವಾಸದಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದಾರೆ.
ಈಗಾಗಲೇ ಈ ಬಗ್ಗೆ ಸಿಎಂ ತಮ್ಮ ನಿವಾಸಕ್ಕೆ ತಮ್ಮನ್ನು ಭೇಟಿಯಾಗಲು ಬರುವವರು ಮೊಬೈಲ್ ತರದಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸಿಎಂ ಭೇಟಿಗೆ ಬರುವವರಿಂದ ಭದ್ರತಾ ಸಿಬ್ಬಂಧಿಗಳು ಮೊಬೈಲ್ ಪಡೆದು ಸಿಎಂ ಭೇಟಿಯಾಗಿ ಹೊರಬಂದ ಬಳಿಕ ವಾಪಸ್ ಕೊಡಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಿಎಂ ಮನೆ ಮುಂದೆ ಈ ಬಗ್ಗೆ ಸಣ್ಣದಾಗಿ ನಾಮಫಲಕವನ್ನೂ ಹಾಕಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/BS-Yeddyurappa-hand.jpg)