ಮೈಸೂರು : ಕಾರ್ ನ ಟಯರ್ ಸ್ಫೋಟ ; ತಾಯಿ-ಮಗನ ಸಾವು!!

ಮೈಸೂರು :

       ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿ, ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯ ಬಳಿ ನಡೆದಿದೆ.

      ಗುಣಲಕ್ಷ್ಮೀ(35) ಮತ್ತು ದೈವಿಕ್​(12) ಮೃತ ದುರ್ದೈವಿಗಳು. ಮಹಾಲಯ ಅಮಾವಾಸ್ಯೆಯ ಪೂಜೆಗೆಂದು ಕುಶಾಲನಗರಕ್ಕೆ ತಂದೆ-ತಾಯಿ-ಮಗ ಮೂವರು ಕಾರಿನಲ್ಲಿ ತೆರಳಿದ್ದರು. ಪೂಜೆ ಮುಗಿಸಿಕೊಂಡು ವಾಪಸ್​ ಮೈಸೂರಿಗೆ ತೆರಳಿದ್ದರು. ಮನೆಗೆ ಇನ್ನು ಒಂದು ಕಿ.ಮೀ ದೂರದಲ್ಲಿರುವಾಗ ಇಂದು ಮುಂಜಾನೆ 4.30ರ ಸಮಯದಲ್ಲಿ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಕಾರಿನ ಟೈಯರ್​ ಬ್ಲಾಸ್ಟ್​ ಆಗಿದ್ದು, ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಕಾರಿನ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದು ಗುಣಲಕ್ಷ್ಮೀ ಪ್ರಾಣಬಿಟ್ಟರೆ, ಅತ್ತ ಹಿಂಬದಿ‌ ಸೀಟ್​ನಲ್ಲಿ ಕುಳಿತ್ತಿದ್ದ ಪುತ್ರ ದೈವಿಕ್​ಗೆ ಸೀಟ್ ಬೆಲ್ಟ್ ಕುತ್ತಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆದಿದ್ದಾನೆ. ಗುಣಲಕ್ಷ್ಮೀ ಅವರ ಪತಿ ಜಗದೀಶ್​ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

     ಮೈಸೂರಿನ ಕುವೆಂಪು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾಲಯ ಅಮಾವಾಸ್ಯೆ ದಿನವೇ ಬೆಳ್ಳಂಬೆಳಗ್ಗೆ ಸಂಭವಿಸಿದ ಈ ಅಪಘಾತಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap