ಮೋದಿ ಗೆಲುವಿಗಾಗಿ ಯಮುನಾ ತೀರದಲ್ಲಿ 10 ದಿನಗಳ ಯಜ್ಞ

ನವದೆಹಲಿ:  

      2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವಿಗಾಗಿ ಮಥುರಾದ ಯಮುನಾ ನದಿ ತೀರದಲ್ಲಿ ಅಕ್ಟೋಬರ್ 10ರಂದು 10 ದಿನಗಳ ಯಜ್ಞ ನಡೆಯಲಿದೆ.

      ಮಥುರಾದ ಮೋದಿ ಚಾರಿಟೇಬಲ್ ಟ್ರಸ್ಟ್ ಶತಚಂಡಿ ಮಹಾಯಜ್ಞವನ್ನು ಹಮ್ಮಿಕೊಂಡಿದ್ದು, ಹಲವಾರು ಪಂಡಿತರು, ಸ್ವಾಮಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಮತ್ತು ಹಿರಿಯ ಆಡಳಿತಗಾರರು ಈ ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 

      ಸಾವಿರಾರು ಹಣತೆ ಬೆಳಗಿ ಮಂತ್ರೋಚ್ಛಾರಣೆ ಮಾಡಿ ಧನಾತ್ಮಕ ಶಕ್ತಿಯನ್ನು ಉತ್ತೇಜಿಸುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಪ್ರಾರ್ಥಿಸಲಾಗುವುದು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link