ಬೆಂಗಳೂರು:
![](http://prajapragathi.com/wp-content/uploads/2018/11/sri-mahamarimman-cc-geofthe.gif)
ಇತ್ತೀಚಿನ ದಿನಮಾನದಲ್ಲಿ ಪ್ರೇಮ ವಿವಾಹ ಹೆಚ್ಚಾಗಿರುವಾಗ ಸರ್ಕಾರ ಅಂತಹ ವಿವಾಹಕ್ಕೆ ಕತ್ತರಿ ಹಾಕಲು ಮುಂದಾಗಿದೆ ತಂದೆ ತಾಯಿಯರ ಅನುಮತಿ ಇಲ್ಲದೆ ಓಡಿ ಬಂದು ವಿವಾಹವಾಗುವುದು, ಪತಿ ಅಥವಾ ಪತ್ನಿಗೆ ಹೇಳದೆಯೇ ಮತ್ತೊಂದು ವಿವಾಹವಾಗುವುದು, ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡಿಕೊಳ್ಳುವ ಚಿಂತನೆಯಲ್ಲಿರುವವರಿಗೆ ಭಾರಿ ಹೊಡೆತ ಬೀಳಲಿದೆ ದೇವಸ್ಥಾನಗಳಲ್ಲಿ ವಿವಾಹವನ್ನು ನಿಷಿದ್ಧ ಮಾಡುವ ಕುರಿತು ಮುಜರಾಯಿ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಮದುವೆಯಲ್ಲಿ ಸಮಸ್ಯೆಗಳು ಎಡವಟ್ಟುಗಳಾದರೆ, ದೇವಸ್ಥಾನದ ಅರ್ಚಕರೇ ಸಾಕ್ಷಿಯಾಗಬೇಕಿರುವುದರಿಂದ ಸಾಕಷ್ಟು ಅರ್ಚಕರಿಗೆ ಇದರಿಂದ ಕಾನೂನು ತೊಡಕುಗಳು ಉಂಟಾಗುತ್ತಿವೆ. ಇನ್ನು ಕೆಲವರು ಅರ್ಚಕರಿಗೆ ಹೆದರಿಸಿ, ಬೆದರಿಸಿ ವಿವಾಹ ನಡೆಸಿಕೊಡುವಂತೆ ಮಾಡುತ್ತಿದ್ದು , ಇದರಿಂದ ಅವರೆಲ್ಲಾ ದೇಗುಲಗಳಲ್ಲಿ ಮದುವೆ ನಿಷೇಧಿಸಬೇಕೆಂದು ಮುಜರಾಯಿ ಇಲಾಖೆಗೆ ವಿನಂತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2018/11/sri-mahamarimman-cc-geofthe.gif)