‘ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ’ – ಸಂತೋಷ್

ಬೆಂಗಳೂರು :  

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯದರ್ಶಿ ಎನ್.ಆರ್.ಸಂತೋಷ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ‘ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

     ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ, ಕಳೆದ ಮೂರು ದಿನದ ಹಿಂದೆ ಕಸಿನ್ ಬ್ರದರ್ ಮದುವೆ ಕಾರ್ಯಕ್ರಮದಲ್ಲಿ ಊಟದ ಮಾಡಿದ ಪರಿಣಾಮ ಅಜೀರ್ಣವಾಗಿತ್ತು., ಈ ವೇಳೆ ಯಾವುದೋ ಮಾತ್ರೆ ಬದಲು ಬೇರೆ ಮಾತ್ರೆ ತಗೊಂಡ ಹಿನ್ನೆಲೆಯಲ್ಲಿ ಡೋಸೇಜ್ ಹೆಚ್ಚಾಗಿ ಈ ರೀತಿಯಾಗಿದೆ ಎಂದು ಹೇಳಿದ್ದಾರೆ.

      ಮುಂದುವರೆದು ಮಾತನಾಡಿದ ಅವರು, ರಾಜಕೀಯ ಒತ್ತಡ ಯಾವ ಕಾಲಕ್ಕೂ ಇರುತ್ತೆ, ಆದರೆ ಮಾತ್ರೆ ತಗೋಳ್ಳೋ ಸ್ವಭಾವ ಇಲ್ಲ. ನಿದ್ರೆ ಬರದೆ ಇದ್ದಾಗ ಮಾತ್ರೆ ತಗೊಳ್ಳುತ್ತಿದೆ. ಆದರೆ ಬೇರೆ ಮಾತ್ರೆ ತಗೊಂಡ ಪರಿಣಾಮ ಈ ರೀತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap