2 ವರ್ಷದ ಮಗುವನ್ನೇ ಹೊಡೆದು ಕೊಂದ ಪಾಲಕರು!!

ಮೈಸೂರು :

      ವಿಪರೀತ ಅಳುತ್ತಿದ್ದ 2 ವರ್ಷದ ಮಗುವನ್ನು ಪಾಲಕರೇ ಹೊಡೆದು ಕೊಂದಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದಲ್ಲಿ ನಡೆದಿದೆ.

      ಕುಶಾಲ್ (2) ಮೃತ ಬಾಲಕ. ಮೂಲತಃ ಹೆಚ್.ಡಿ.ಕೋಟೆ ತಾಲೂಕಿನ ಸವ್ವೆ ಗ್ರಾಮದ ಶಶಿಕುಮಾರ್ ಮತ್ತು ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಖುಷಿ (4) ಮತ್ತು ಕುಶಾಲ್ ಎಂಬ ಇಬ್ಬರು ಮಕ್ಕಳಿದ್ದರು. ಕುಶಾಲ್ ಹುಟ್ಟಿದ ದಿನದಿಂದಲೂ ಈ ಮಗು ನನ್ನದಲ್ಲ ಎಂದು ಶಶಿಕುಮಾರ್ ತನ್ನ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಜೊತೆಗೆ ಮಗುವಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.

      ಜೂನ್ 30 ರಂದು ರಾತ್ರಿ ಅಳುತ್ತಿದ್ದ ಮಗುವಿಗೆ ದಂಪತಿ ಹೊಡೆದಿದ್ದಾರೆ. ಥಳಿತಕ್ಕೊಳಗಾಗಿ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ದಂಪತಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಜುಲೈ 3 ರಂದು ಮೃತಪಟ್ಟಿದೆ.

      ಮಗುವನ್ನು ಪಾಲಕರೇ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap