ಗೇಮ್ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕ!!

ಕಲಬುರಗಿ :

     ವಿಡಿಯೋ ಗೇಮ್ ಆಡಬೇಡ ಎಂದು ಪೋಷಕರು ಬೈದಿದಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ನಡೆದಿದೆ.

      ನಗರದ ಬ್ರಹ್ಮಪುರ ಬಡಾವಣೆಯ ರಾಹುಲ್ ಸೊಲ್ಲಾಪುರ (15) ಆತ್ಮಹತ್ಯೆ ಮಾಡಿಕೊಂಡವ. ಕಳೆದ ಕೆಲವು ವರ್ಷಗಳಿಂದ ಮೊಬೈಲ್‌ ವಿಡಿಯೊ ಗೇಮ್‌ಗೆ ಮಾರುಹೋಗಿದ್ದ ಈತ, ದಿನದ ಬಹುಭಾಗ ಅದರಲ್ಲೇ ಕಳೆಯುತ್ತಿದ್ದ. ಇದೇ ವಿಚಾರವಾಗಿ ತಂದೆ-ತಾಯಿ ಹಲವು ಬಾರಿ ಬುದ್ಧಿವಾದ ಹೇಳಿದ್ದರು.

      ಗುರುವಾರ ಕೂಡ ದಿನವಿಡೀ ವಿಡಿಯೊ ಗೇಮ್‌ ಆಡುವುದರಲ್ಲೇ ಕಳೆದ. ಇದನ್ನು ಕಂಡು ಪಾಲಕರು  ಬೈದಿದ್ದಾರೆ. ಇಷ್ಟಕ್ಕೆ ಬೇಸರ ಮಾಡಿಕೊಂಡ ಬಾಲಕ, ಮನೆಯಲ್ಲಿಯೇ ಫ್ಯಾನ್‌ಗೆ ಹಗ್ಗ ಹಾಕಿ ನೇಣಿಗೆ ಶರಣಾಗಿದ್ದಾನೆ. ವಿಷಯ ಬೆಳಿಗ್ಗೆ ಗೊತ್ತಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap