ತುಮಕೂರು:
ರೌಡಿಶೀಟರ್ ಮೋಹನ್ ಕುಮಾರ್ ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಟೆಂಪಲ್ ರಾಜನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಈತ ನಿನ್ನೆ ಬೆಳಗುಂಬ ಸಮೀಪದ ವಡ್ಡರಹಳ್ಳಿಯ ಬೆಟ್ಟದಲ್ಲಿ ಅಡಗಿಕೊಂಡಿರುವುದನ್ನು ತಿಳಿದ ತಕ್ಷಣ ಪೊಲೀಸರ ತಂಡ ಬೆಟ್ಟದ ಬಳಿ ಹೋಗಿ ಆ ಪ್ರದೇಶವನ್ನು ಸುತ್ತುವರೆದು ಆರೋಪಿ ರಾಜುನನ್ನು ಬಂಧಿಸಲು ಮುಂದಾಗುತ್ತಿದ್ದಂತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ವೃತ್ತ ನಿರೀಕ್ಷಕ ಶ್ರೀಧರ್ ಹಾರಿಸಿದ ಗುಂಡು ಆರೋಪಿಯ ಮೊಣಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಈ ತಂಡ ಆತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ.
ಕೊಲೆಯಾದ ಮೋಹನ್ಕುಮಾರ್ ಹಾಗೂ ಪೊಲೀಸರಿಗೆ ಸಿಕ್ಕಿಬಿದ್ದಿರುವ ಟೆಂಪರ್ ರಾಜು ರೌಡಿಶೀಟರ್ಗಳಾಗಿದ್ದು, ಇವರಿಬ್ಬರ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
