ಬೆಂಗಳೂರು :
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇಂದೇ ಖಾತೆ ಹಂಚಿಕೆ ಪ್ರಕ್ರಿಯೆ ನಡೆಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, ನಿರ್ದಿಷ್ಟ ಖಾತೆಗಳಿಗೆ ಮಿತ್ರಮಂಡಳಿ ಸಚಿವರು ಪಟ್ಟು ಮುಂದುವರಿಸಿದ್ದೇ ಇಂದು ಖಾತೆ ಹಂಚಿಕೆಗೆ ಬ್ರೇಕ್ ಬೀಳಲು ಕಾರಣ ಎನ್ನಲಾಗಿದೆ. ಎಲ್ಲವೂ ಸರಿಹೋಗಿದ್ದಿದ್ರೆ ಇಂದು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರ ಬಳಿ ಅನುಮತಿಗಾಗಿ ಸರ್ಕಾರ ಕಳಿಸಬೇಕಿತ್ತು. ಆದರೆ ಕಗ್ಗಂಟು ಹಿನ್ನೆಲೆಯಲ್ಲಿ ಇನ್ನೂ ಖಾತೆ ಹಂಚಿಕೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.
ಇಂದೇ ಖಾತೆಯನ್ನು ಹಂಚಿಕೆ ಮಾಡಬೇಕಾಗಿತ್ತಾದರೂ ರಜಾ ದಿನವಾದ ಕಾರಣ ಎರಡು ದಿನ ಮುಂದೂಡಿಕೆಯಾಗಿದೆ. ಸೋಮವಾರ ಖಾತೆಗಳ ಹಂಚಿಕೆಯಾಗಲಿದೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ಸಚಿವರು ಪ್ರಬಲ ಖಾತೆಗಳನ್ನು ಪಡೆಯಲು ಲಾಭಿ ಆರಂಭಿಸಿದ್ದಾರೆ. ಇದರ ನಡುವೆ ಕೆಲ ಸಚಿವರು ನಿರ್ಧಿಷ್ಟ ಖಾತೆಗೆ ಪಟ್ಟು ಹಿಡಿದಿರುವುದು ವಿಳಂಬಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/Rebels-cabinet-join.gif)