ಆತ್ಮಹತ್ಯೆಯಲ್ಲಿ ಅಂತ್ಯವಾಯಿತು ಅಪ್ರಾಪ್ತೆಯೊಂದಿಗೆ ವಿವಾಹಿತನ ಪ್ರೀತಿ!!

ರಾಯಚೂರು : 

    ವಿವಾಹಿತನಾಗಿ ಇಬ್ಬರು ಮಕ್ಕಳಿದ್ದರೂ, ಅಪ್ರಾಪ್ತೆಯ ಜೊತೆ ಪ್ರೀತಿ ಆಟವಾಡಿ ಆಕೆಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಲಿಂಗಸಗೂರ ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ನಡೆದಿದೆ.

     ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಜಾಲೇರದೊಡ್ಡಿಯ ಮಹಾದೇವಿ(17) ಹಾಗೂ ಯರಜಂತಿ ಗ್ರಾಮದ ನರಸಪ್ಪ (28)ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೇ ವಿವಾಹಿತನಾಗಿ ಇಬ್ಬರು ಮಕ್ಕಳನ್ನು ಹೊಂದಿರುವಂತ ನರಸಪ್ಪನೊಂದಿಗೆ ಮಹಾದೇವಿ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

     ವಿವಾಹಿತನಾಗಿ ಇಬ್ಬರು ಮಕ್ಕಳಿದ್ದರೂ, ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ಆತ, ಆಕೆಯೊಂದಿಗೆ ಓಡಿ ಕೂಡ ಹೋಗಿದ್ದನು. ವಿಷಯ ತಿಳಿದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಯುವತಿಗೆ ಬುದ್ಧಿ ಹೇಳಿ, ಅಪ್ರಾಪ್ತೆಯಾಗಿದ್ದರಿಂದ ಮೇಜರ್ ಆಗೋವರೆಗೆ ಬಾಲಮಂದಿರದಲ್ಲಿರಿಸಿ, ಆನಂತ್ರ ವಿವಾಹವಾಗಲು ತಿಳಿಸಲಾಗಿತ್ತು.

     ಆದರೂ ಇಬ್ಬರು ಪ್ರೀತಿ ಸಿಗೋದಿಲ್ಲ ಅನ್ನೋ ಮನಸ್ಥಿತಿಯಲ್ಲಿ ಇಂದು ಬೆಳಗ್ಗೆ ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಚೀಟಿ ಬರೆದಿಟ್ಟು ವಿಷ ಸೇವಿಸಿದ್ದಾರೆ. ಮುಂದಿನ ಜನ್ಮದಲ್ಲಿ ಇಬ್ಬರೂ ಗಂಡ ಹೆಂಡತಿ ಆಗೋಣವೆಂದು ಚೀಟಿಯಲ್ಲಿ ಬರೆಯಲಾಗಿದೆ 

     ಬಳಿಕ ಮಹಾದೇವಿ ಸಾವನ್ನಪ್ಪಿದ್ದರೇ, ಪ್ರಿಯಕರ ನರಸಪ್ಪ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಹೀಗೆ ಅಪ್ರಾಪ್ತೆಯೊಂದಿಗೆ ವಿವಾಹಿತನ ಪ್ರೀತಿ, ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap