ಬೆಂಗಳೂರು:
ನಗರದ ಗಿರಿನಗರದಲ್ಲಿರುವ ‘ಪುನರ್ವಸು’ ಕಟ್ಟಡದ ಜಾಗಕ್ಕೆ ಸಂಬಂಧಿಸಿ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ರಾಮಚಂದ್ರಾಪುರಮಠದ ಗಿರಿನಗರ ಶಾಖಾಮಠದ ಜಾಗವೂ ಸೇರಿದಂತೆ ಪುನರ್ವಸು ನಿವೇಶನಕ್ಕೆ ಸಂಬಂಧಿಸಿದ ವಿಚಾರಣೆಗೆ ತನ್ನನ್ನು ಪ್ರತಿವಾದಿಯಾಗಿ ಪರಿಗಣಿಸಬೇಕು ಎಂದು ವಿಶ್ವಭಾರತಿ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿ, ರಾಜ್ಯ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣ ಹೈಕೋರ್ಟ್ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದ ಸಂದರ್ಭದಲ್ಲಿ ವಿಶ್ವಭಾರತಿ ಸೊಸೈಟಿ ಪ್ರಕರಣದಿಂದ ಹಿಂದೆ ಸರಿಯಿತು. ಇದರಿಂದ ಪ್ರಕರಣ ವಜಾಗೊಳಿಸಲಾಯಿತು. ಇದರೊಂದಿಗೆ ರಾಮಚಂದ್ರಾಪುರ ಮಠಕ್ಕೆ ಜಯ ಸಿಕ್ಕಿದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ