ಶಿವಳ್ಳಿ ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ!!

ಬೆಂಗಳೂರು:

      ಸಂಪುಟ ಪುನಾರಚನೆ ವೇಳೆ ರಾಮಲಿಂಗರೆಡ್ಡಿಯವರಿಗೆ ಅವಕಾಶ ನೀಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು  ಹೇಳಿಕೆ ನೀಡಿದ್ದಾರೆ.

Related image

       ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ” ದಿವಂಗತ ಶಿವಳ್ಳಿಯವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ  ನೀಡಲಾಗುತ್ತದೆ. ಸಂಪುಟ ಪುನರ್​ ರಚನೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೆ. ಈ ಬಗ್ಗೆ ರಾಮಲಿಂಗಾರೆಡ್ಡಿ ಜೊತೆ ನಾನೇ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.

      ” ಕಾಂಗ್ರೆಸ್​​ನಲ್ಲಿ ಮೂಲ, ವಲಸಿಗ ಭೇದಭಾವ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಜೊತೆಯಲ್ಲಿಯೇ ಇದ್ದೇವೆ. ವಿಶ್ವನಾಥ್, ರೋಷನ್ ಬೇಗ್ ಬಗ್ಗೆ ನಾನು ಮಾತಾಡಲ್ಲ. ವಿಶ್ವನಾಥ್ ನಮ್ಮ ಪಕ್ಷದವರೇ ಅಲ್ಲ, ನಾನು ಮಾತಾಡಲ್ಲ,” ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

 

Recent Articles

spot_img

Related Stories

Share via
Copy link