ಬೆಳಗಾವಿ:
ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು” ಎಂದು ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ.
ಕಳೆದ ಎಂಟು ದಿನಗಳಿಂದ ಸ್ವತಃ ಕಾಂಗ್ರೆಸ್ನವರಿಗೇ ಸಿಗದೆ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಗೋಕಾಕ್ಮಿಲ್ನಲ್ಲಿರುವ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡಿ ನಿವಾಸಕ್ಕೆ ಹಿಂದಿರುಗುವಾಗ ಪ್ರತ್ಯಕ್ಷರಾಗಿದ್ದರು. ಬೆಳಗ್ಗೆ ಬ್ಯಾಡ್ಮಿಂಟನ್ ಆಟ ಮುಗಿಸಿ ಬಂದ ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಲು ಮುಂದಾದಾಗ ಕೋಪವನ್ನು ಹೊರ ಹಾಕಿ , ನಿಮ್ಮದು ಅತಿಯಾಯ್ತು ಎಂದು ನೇರವಾಗಿ ಮನೆಯ ಒಳಗೆ ತೆರಳಿದ್ದಾರೆ.
ಆಗ ವರದಿಗಾರರು ರಮೇಶ್ ಅವರ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಈ ರೀತಿ ಗರಂ ಆಗಿ ಮಾತನಾಡಿ, ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯೊಳಕ್ಕೆ ತೆರಳಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳದಲ್ಲಿದ್ದ ರಮೇಶ್ ಅವರು ಕೊನೆಗೂ ಮಂಗಳವಾರ ತಡರಾತ್ರಿ ಗೋಕಾಕದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/file71xpxgbkdllg1owzbou0.gif)