ಚಿತ್ರದುರ್ಗ:
ಶಾಸಕರೊಬ್ಬರ ಬಾಡಿಗೆ ಮನೆಯ ಬಾಗಿಲು ಒಡೆದು ಒಳನುಗ್ಗಿದ ಚೋರರು ಮನೆಯನ್ನೆಲ್ಲಾ ಜಾಲಾಡಿ ನಂತರ ಕೈಗೆ ಸಿಕ್ಕಿದ ಐದು ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾರೆ.
ಕೂಡ್ಲಗಿ ಶಾಸಕ ಎನ್.ವೈ.ಗೋಪಾಲ ಕೃಷ್ಣ ಅವರು ಹಲವು ವರ್ಷಗಳ ಹಿಂದೆ ದವಳಗಿರಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಚಿತ್ರದುರ್ಗಕ್ಕೆ ಆಗಾಗ್ಗೆ ಬಂದು-ಹೋಗುತ್ತಿದ್ದರಿಂದ ನಗರಕ್ಕೆ ಬಂದಾಗ ಈ ಮನೆಯಲ್ಲೇ ತಂಗುತ್ತಿದ್ದರು.
ಇದೀಗ ಚುನಾವಣೆ ಸಮಯವಾಗಿರುವುದರಿಂದ ಶಾಸಕರು ಹಣ ಇಟ್ಟಿರಬಹುದೆಂದು ಭಾವಿಸಿದ್ದ ಕಳ್ಳರು ರಾತ್ರಿ ಇವರ ಮನೆ ಬಾಗಿಲು ಒಡೆದು ಒಳನುಗ್ಗಿ ಮನೆಯನ್ನೆಲ್ಲಾ ಜಾಲಾಡಿ, ಕೈಗೆ ಸಿಕ್ಕಿದ ಸಾವಿರಾರು ರೂ. ಮೌಲ್ಯದ ವಸ್ತುಗಳು ಹಾಗೂ 5 ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಬಳಿಕ ಕೋಟೆ ಠಾಣೆ CPI ಪ್ರಕಾಶ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
