ಬಾಲಿವುಡ್ ನಲ್ಲಿ #MeToo ಅಭಿಯಾನಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ನಂತರ, ಸ್ಯಾಂಡಲ್ ವುಡ್ ನಲ್ಲೂ ಒಬ್ಬೊಬ್ಬರೇ ಮೀಟೂ ಅಭಿಯಾನದಲ್ಲಿ ತಮ್ಮ ಮೇಲೆ ಆದ ಕಿರುಕುಳ, ದೌರ್ಜನ್ಯಗಳನ್ನ ಬಯಲು ಮಾಡಿದ್ದಾರೆ. ಈ ಕುರಿತು ‘ಗಂಡ-ಹೆಂಡತಿ’ ಖ್ಯಾತಿಯ ಸಂಜನಾ ಮಾತನಾಡಿದ್ದು, ತಮ್ಮ ಮೇಲೂ ನಿರ್ದೇಶಕರಿಂದ ದೌರ್ಜನ್ಯವಾಗಿದೆ ಎಂದು ದೂರಿದ್ದರು, ಆದರೆ ಈಗ ಈ ಪ್ರಕರಣಕ ಅಂತ್ಯ ಕಾಣುವ ಹಂತ ತಲುಪಿದೆ.
ಸ್ಯಾಂಡಲ್ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಿಚ್ಚಿಟ್ಟಿದ್ದು, `ಗಂಡ-ಹೆಂಡತಿ’ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಶೂಟಿಂಗ್ ವೇಳೆ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.
ಇದು ಸಂಜನಾ ಹಾಗೂ ರವಿ ಶ್ರೀವತ್ಸ ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತಲ್ಲದೇ ಸುದ್ದಿ ವಾಹಿನಿಯ ಲೈವ್ ಕಾರ್ಯಕ್ರಮದಲ್ಲಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು.
ಇದೀಗ ಸಂಜನಾ ತಮ್ಮ ಆರೋಪದ ಕುರಿತು ನಿರ್ದೇಶಕ ರವಿ ಶ್ರೀವತ್ಸ ಅವರ ಬಳಿ ಕ್ಷಮೆ ಕೇಳಿದ್ದು ಚರ್ಚೆಗೆ ಗ್ರಾಸವಾಗಿದೆ.
ನವೆಂಬರ್ 8ರ ಒಳಗೆ ಬಂದು ನಿರ್ದೇಶಕರ ಸಂಘದಲ್ಲಿ, ಚಿತ್ರದ ನಿರ್ದೇಶಕ ರವಿ ಶ್ರೀ ವತ್ಸಾ ಅವ್ರ ಬಳಿ ಬಹಿರಂಗ ಕ್ಷಮೆ ಕೇಳ್ಬೇಕು ಎಂದು ಚಲನಚಿತ್ರ ನಿರ್ದೇಶಕರ ಸಂಘ ಗಡುವು ನೀಡಿತ್ತು. ಕಲಾವಿದರ ಸಂಘದ ಹಿರಿಯ ಮಾತಿಗೆ ಬೆಲೆಕೊಟ್ಟು, ನಿರ್ದೇಶಕ ಸಂಘದವರ ಮನ ನೋಯಿಸಿದ್ದಕ್ಕೆ ಕ್ಷಮೆ ಕೇಳ್ತಾ ಇದ್ದೇನೆ ಎಂದು ತಿಳಿಸಿ ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಟಿ ಸಂಜನಾ ಗಲ್ರಾನಿ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
